( ಅನಾಮಧೇಯ ಇಂಗ್ಲೀಷ್ ಮೂಲದಿಂದ ಅನುವಾದಿತ)
- ನವರತ್ನ ಸುಧೀರ್.
ಗುಬ್ಬಚ್ಚಿ ಚಿಕ್ಕ ಪಕ್ಷಿ ಅದರ ರೆಕ್ಕೆ ಪುಕ್ಕಗಳು ಜಾಸ್ತಿಯಾಗಿಲ್ಲದಿರುವುದರಿಂದ ಹೆಚ್ಚಿನ ಚಳಿ ತಡೆಯಲಾಗುವುದಿಲ್ಲ. ಅದೇ ಕಾರಣಕ್ಕಾಗಿ ಉತ್ತರಭಾರತದ ಗುಬ್ಬಚ್ಚಿಗಳೆಲ್ಲವೂ ಚಳಿಗಾಲ ಬರುತ್ತಿದ್ದಂತೆ ಬೆಚ್ಚಗಿರುವ ದಕ್ಷಿಣ ಕ್ಕೆ ವಲಸೆ ಹೋಗುತ್ತವಂತೆ.
ಒಂದು ಗುಬ್ಬಚ್ಚಿ ಮಾತ್ರ ಎಲ್ಲರಿಗಿಂತಲೂ ತಾನು ಸ್ವಲ್ಪ ಜಾಸ್ತಿ ಬುದ್ಧಿವಂತ ಎಂದು ಅಹಂಭಾವವಿದ್ದು, ಎಲ್ಲರ ಹಾಗೆ ನಾನೇಕೆ ಮಾಡಬೇಕು? ಬದಲಾಗಿ ಈ ಬಾರಿ ಇಲ್ಲಿಯೇ ಉಳಿದು ಚಳಿಗಾಲದ ಆನಂದವನ್ನು ಸವಿಯೋಣ ಅಂದುಕೊಂಡು ತನ್ನ ಬಂಧು ಬಾಂಧವರ ಜೊತೆ ದಕ್ಷಿಣಕ್ಕೆ ಹೋಗದೆ ಉಳಿದುಕೊಂಡಿತು. ಚಳಿಗಾಲ ಶುರುವಾದ ಮೊದಲ ಕೆಲವು ದಿನಗಳಲ್ಲೇ ಆ ಗುಬ್ಬಚ್ಚಿಗೆ ಮೈ ಕೊರೆತ ಮತ್ತು ನಡುಕ ಆರಂಭವಾಗಿ ಹೆದರಿಕೆಯಾಗತೊಡಗಿತು. ಆರಂಭದಲ್ಲೇ ಹೀಗಾದರೆ ಮುಂದೇನು ಗತಿಯಪ್ಪಾ ಎಂದು ಯೋಚಿಸಿ ಸ್ವಲ್ಪ ತಡವಾಗಿದ್ದರೂ ಚಿಂತೆಯಿಲ್ಲ ಈಗಲಾದರೂ ದಕ್ಷಿಣಕ್ಕೆ ಹಾರಿಬಿಡೋಣ ಎಂದು ನಿರ್ಧಾರ ಮಾಡಿ ಬೆಳಕಾಗುವ ಮೊದಲೇ ದಕ್ಷಿಣಾಭಿಮುಖವಾಗಿ ಹಾರತೊಡಗಿತು. ರೆಕ್ಕೆಗಳ ಮೇಲೆ ಶೇಖರವಾಗಿದ್ದ ಮಂಜಿನ ತೆಳು ಪದರ ಆ ಚಳಿಯಲ್ಲಿಯೇ ಸ್ವಲ್ಪ ಹಿಮಗಟ್ಟಿ ರೆಕ್ಕೆ ಭಾರ ಎನಿಸತೊಡಗಿತು. ಬೇಗನೆ ಅಯಾಸವೂ ಆಯಿತು. ದಿಗಂತದಲ್ಲಿ ಸೂರ್ಯ ಆಗತಾನೆ ಮೇಲೇರುತ್ತಿದ್ದ. ಅವನ ಕಿರಣಗಳು ಇನ್ನೂ ಅಷ್ಟು ಪ್ರಖರವಾಗಿರಲಿಲ್ಲ. ಆಗಾಗ ಮಧ್ಯೆ ಸ್ವಲ್ಪ ಭೂಮಿಯ ಮೇಲಿಳಿದು ವಿಶ್ರಾಂತಿ ಪಡೆದು ಮುಂದುವರೆಯುವುದು ಒಳಿತು ಎಂದೆನಿಸಿ ಆ ಗುಬ್ಬಚ್ಚಿ ಒಂದು ಹುಲ್ಲು ಗಾವಲಿನ ಮೇಲಿಳಿಯಿತು. ಅಲ್ಲಿಯೇ ಮೇಯುತ್ತಿದ್ದ ಹಸುವೊಂದರ ಹಿಂದೆ ನೆರಳಿನಲ್ಲಿ ಕುಳಿತು ವಿಶ್ರಮಿಸತೊಡಗಿತು. ತನ್ನ ಹಿಂದೆ ಕಾಲ ಬಳಿ ಸಣ್ಣ ಗುಬ್ಬಚ್ಚಿಯೊಂದು ಕುಳಿತಿದೆ ಎಂಬ ಅರಿವಿಲ್ಲದ ಆ ಹಸು ತನ್ನ ಪ್ರಾತರ್ವಿಧಿಗನುಗುಣವಾಗಿ ಸೆಗಣಿ ಹಾಕಿತು. ತಪತಪನೆ ಬಿದ್ದ ಬಿಸಿ ಬಿಸಿ ಸೆಗಣಿಯಲ್ಲಿ ಆ ಚಳಿಯಿಂದ ನಡುಗುತ್ತಿದ್ದ ಗುಬ್ಬಿ ಸಂಪೂರ್ಣವಾಗಿ ಮುಳುಗಿಹೋಯಿತು.
ಸದೈವವಶಾತ್ ಆ ಬಿಸಿ ಸೆಗಣಿಯಿಂದ ಗುಬ್ಬಚ್ಚಿಯ ರೆಕ್ಕೆಯ ಮೇಲ್ಗಟ್ಟಿದ್ದ ಹಿಮ ಬೇಗನೆ ಕರಗಿ ಅದರ ದೇಹಕ್ಕೂ ಸ್ವಲ್ಪ ತಾಪ ತಟ್ಟಿ ಮೈ ಬೆಚ್ಚಗಾಯಿತು. ಮನಸ್ಸಿಗೆ ಅದೇನೋ ಹಿತವಾದ ಅನುಭವವಾಯಿತು. ಗುಬ್ಬಿಗೆ ಹಾಡಬೇಕೆನಿಸಿತು. ತನಗೆಷ್ಟು ಸಾಧ್ಯವೋ ಅಷ್ಟುಎತ್ತರದ ಧ್ವನಿಯಲ್ಲಿಸುಶ್ರಾವ್ಯವಾಗಿ ಹಾಡತೊಡಗಿತು.
ಅಲ್ಲಿ ಹತಿರದಲ್ಲಿಯೇ ನಡೆದು ಹೋಗುತ್ತಿದ್ದ ಒಂದು ಬೆಕ್ಕಿಗೆ ಈ ಹಾಡು ಕೇಳಿಸಿತು. ಈ ಹಾಡಿನ ಮೂಲ ಎಲ್ಲಿ ಎಂದು ಹುಡುಕಿದ ಆ ಬೆಕ್ಕು ಬೇಗನೆ ಆ ಸೆಗಣಿಯ ಕುಪ್ಪೆಯನ್ನು ಕೆದರಿಸಿ, ಅಲ್ಲಿ ಹುದುಗಿ ಹಾಡಿನಲ್ಲಿ ತನ್ಮಯವಾಗಿದ್ದ ಗುಬ್ಬಚ್ಚಿಯನ್ನು ಹಿಡಿದು ಕಚ್ಚಿ ನುಂಗಿಹಾಕಿತು.
ನೀತಿ ಪಾಠ ೧: ನಿಮ್ಮ ಮೇಲೆ ಸೆಗಣಿ ಹಾಕುವವರೆಲ್ಲರೂ ನಿಮ್ಮ ಶತ್ರುಗಳಲ್ಲ!
ನೀತಿ ಪಾಠ ೨: ನಿಮ್ಮನ್ನು ಸೆಗಣಿಯ ಕುಪ್ಪೆಯಿಂದ ಕೆದರಿ ಹೊರಗೆ ತೆಗಯುವರೆಲ್ಲರೂ ನಿಮ್ಮ ಮಿತ್ರರಲ್ಲ!
ನೀತಿ ಪಾಠ ೩: ನೀವು ಸೆಗಣಿಯ ರಾಶಿಯಲ್ಲಿ ಮುಳುಗಿದ್ದಾಗ್ಯೂ , ಬೆಚ್ಚನೆಯ ಅನುಭವವಾಗಿ ಮನಸ್ಸಿಗೆ
ಹಿತವೆನಿಸುತ್ತಿದ್ದರೆ ಬಾಯಿ ಮುಚ್ಚಿಕೊಂಡಿರಿ! ಹಾಡಬೇಡಿ! ಯಾರಾದರೂ ಉದ್ಧಾರ
ಮಾಡಿಯಾರು.ಎಚ್ಚರಿಕೆ!
***************************************
Saturday, 29 December 2007
Sunday, 23 December 2007
ಕನ್ನಡ ನಾಡಿಗೆ, ಕನ್ನಡಿಗರಿಗೆ ನಿಮ್ಮ ಕೃತಜ್ನತೆ ತೋರಿಸಿ - ಗುರುಗಳ ಮಾರ್ಗದರ್ಶನ.
- ನವರತ್ನ ಸುಧೀರ್
ಬೆಂಗಳೂರಿನಲ್ಲಿ ನೆಲಸಿರುವ ಕೇರಳದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಒಕ್ಕೂಟ ಕಳೆದ ಭಾನುವಾರ ೨೫ ನವೆಂಬರ್ ೨೦೦೭ ರಂದು ತಮ್ಮ ವಾರ್ಷಿಕೋತ್ಸವವನ್ನು ಆಚರಿಸಿತು. ಸೆಂಟ್ರಲ್ ಕಾಲೇಜಿನ ಜ್ನಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಸಮಾರಂಭಕ್ಕೆ ಆಹ್ವಾನಿತ ಬೆರಳೆಣಿಕೆಯ ಕನ್ನಡಿಗರಲ್ಲಿ ನಾನೂ ಒಬ್ಬನಾಗಿದ್ದೆ.
ಬರೀ ಮಲಯಾಳಿಗಳಿಂದ ಕಿಕ್ಕಿರಿದಿದ್ದ ಸಭಾಂಗಣ. ಹೆಂಗಸರು ಮಕ್ಕಳಾದಿಯಾಗಿ ಕುಟುಂಬದ ಎಲ್ಲ ಸದಸ್ಯರೂ ಇದ್ದದ್ದರಿಂದ ಸಾಕಷ್ಟು ಗದ್ದಲವಿತ್ತು.
ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಫೋಸಿಸ್ನ ಮುಖ್ಯಸ್ಥ ಶ್ರೀ. ಕ್ರಿಸ್ ಗೋಪಾಲಕ್ರಿಷ್ಣನ್. ಗೌರವ ಅತಿಥಿಗಳಾಗಿ “ಕಾರ್ಟ್ಮನ್” ಎಂದು ವಿಖ್ಯಾತರಾದ ಪ್ರೊ. ಎನ್. ಎಸ್. ರಾಮಸ್ವಾಮಿ ಹಾಗೂ ಅಂದಿನ ಮುಖ್ಯ ಸ್ಪಾನ್ಸರ್ ಶ್ರೀ. ಬಿಜು ಜಾನ್. ಎಲ್ಲರೂ ಯಶಸ್ವಿ ಮಲೆಯಾಳಿಗಳು ಮಾತ್ರ.
ನಿರ್ವಾಹಕರು ಕಾರ್ಯಕ್ರಮವನ್ನು ಮಲಯಾಳಿಯಲ್ಲಿಯೇ ಕಾಂಪೇರ್ ಮಾಡುತ್ತ ನಡೆಸಿಕೊಟ್ಟರೂ, ಸಂಘದ ಅಧ್ಯಕ್ಷ ,ಕಾರ್ಯದರ್ಶಿಗಳು ಮತ್ತು ಮುಖ್ಯ ಅತಿಥಿಗಳಾದ ಕ್ರಿಸ್ ಗೋಪಾಲಕೃಷ್ಣನ್ ಎಲ್ಲರೂ ಇಂಗ್ಲೀಷ್ನಲ್ಲೇ ಭಾಷಣ ಮಾಡಿದರು. ಸ್ವಲ್ಪ ಬೋರಾಗುವಂತಿದ್ದ ಭಾಷಣಗಳನ್ನು ಕೇಳಿ ಸಭಿಕರ ಗದ್ದಲ ಸ್ವಲ್ಪ ನಿಧಾನವಾಗಿ ಏರುವಂತಿತ್ತು.
ಪ್ರೊ. ರಾಮಸ್ವಾಮಿಯವರು ತಮ್ಮ ಭಾಷಣ ಮಾತ್ರ ಮಲಯಾಳಂನಲ್ಲಿಯೇ ಅರಂಭಿಸಿದರು. ನನಗೆ ಅವರ ಭಾಷಣ ನೂರಕ್ಕೆ ನೂರರಷ್ಟು ಅರ್ಥವಾಗದಿದ್ದರೂ, ಒಟ್ಟಾರೆ ಅದರ ಸಾರಂಶವೇನು ಅನ್ನುವುದು ಚೆನ್ನಾಗಿಯೇ ತಿಳಿದುಬಂತು. ಮಲೆಯಾಳಿಗಳು ಎಲ್ಲಿ ಹೋದರು ತಮ್ಮ ಜನರನ್ನು ಒಟ್ಟು ಗೂಡಿಸಿಕೊಳ್ಳುವ ಅಪ್ರತಿಮ ಸಂಘಟನಕಾರರು, ತಾವು ವಲಸೆ ಹೋದ ಬೇರೆ ರಾಜ್ಯ ಅಥವಾ ದೇಶಗಳನ್ನು ತಮ್ಮ ಕಾಯಕ ಕೌಶಲಗಳಿಂದ ಅಭಿವೃಧ್ಧಿ ಮತ್ತು ಉಧ್ಧಾರ ಮಾಡುತ್ತ ತಮ್ಮ ಹುಟ್ಟು ಕೇರಳವನ್ನು ಮಾತ್ರ ಪ್ರಗತಿಯ ಪಥದಲ್ಲಿ ದೂಕಿ “ಹಾಳು ಮಾಡದೆ” ಔದ್ಯೋಗಿಕವಾಗಿ ಹಾಗೂ ಅರ್ಥಿಕವಾಗಿಯೂ ಹಿಂದೆ ಇಟ್ಟಿರುವ ಮಹಾನ್ದೇಶಭಕ್ತರು ಎಂದು ಕುಚೋದ್ಯ ಮಾಡುತ್ತ ತಿಳಿಹಾಸ್ಯದ ನೆರವಿನಿಂದ ಸಭಿಕರ ಮನಸೆಳೆದರು ಪ್ರೊ. ರಾಮಸ್ವಾಮಿಯವರು. ಅವರ ಪ್ರತಿಯೊಂದು ಮಾತಿಗೂ ನಗುತ್ತಿದ್ದ ಮಲಯಾಳಿ ಇಂಜಿನಿಯರ್ ಸಮುದಾಯಕ್ಕೆ ಹಿತವಚನ ನೀಡುತ್ತಿದ್ದಂತೆಯೇ, “ಈ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಕ್ಕೆ ಕೇವಲ ಮಲಯಾಳೀ ಆತಿಥೇಯರನ್ನು ಮಾತ್ರ ಕರೆದು ಆದರಿಸಿದ್ದು ಸರಿಯಲ್ಲ. ನೀವುಗಳು ಇರುವ ನಾಡು ಕರ್ನಾಟಕ. ಕುಡಿಯುವ ನೀರು ಅಲ್ಲಿಯದು. ಕನ್ನಡಿಗರಿಗೆ ನಿಮ್ಮ ಕೃತಜ್ನತೆಯ ಕುರುಹಾಗಿ ಇಂತಹ ಸಮಾರಂಭಗಳಲ್ಲಿ ನೀವು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕನ್ನಡಿಗರನ್ನು ಆಹ್ವಾನಿಸಿ ಆದರಿಸಬೇಕು” ಎಂದು ಮಾರ್ಗದರ್ಶನ ನೀಡಿದರು. “ಮುಂದಿನ ವರ್ಷ ನಾನು ಈ ವೇದಿಕೆಯ ಮೇಲೆ ಕೇವಲ ಕನ್ನಡಿಗ ದಿಗ್ಗಜಗಳನ್ನು ನೋಡುವಹಾಗಿರಬೇಕು” ಎಂದರು. ಬರೀ ಮಲೆಯಾಳಿಗಳೇ ತುಂಬಿದ್ದ ಆ ಸಭೆಯಲ್ಲಿ ತಮ್ಮವರಿಗೇ ನೀಡಿದ ಅವರ ಈ ಸಂದೇಶ ಹೃದಯಪೂರ್ವಕವಾಗಿ ಬಂದು ಅಸ್ವಾರ್ಥತೆಯಿಂದ ತುಂಬಿದ್ದಂತೆ ತೋರಿತು.
ಇವರ ನಂತರ ಮಾತಾನಾಡಿದ ಯುವ ಉದ್ಯಮಿ ಬಿಜು ಜಾನ್ ಕೂಡ ಎಲ್ಲರಿಗೂ ಕನ್ನಡ ಕಲೆತು, ಕನ್ನ್ನಡಿಗರೊಂದಿಗೆ ಬೆರೆತು ಇರುವ ಸಂದೇಶ ನೀಡಿದರು.
ಅಧಿಕಾರ ಮೋಹ- ದಾಹ, ವಚನಭ್ರಷ್ಟತೆ, ಅನೀತಿಯುತ ವಿದ್ಯಮಾನಗಳ ಬಗ್ಗೆಯೇ ಕೇಳುತ್ತಿರುವ ಈ ಕಿವಿಗಳಿಗೆ, ಕೃತಾರ್ಥಭಾವದ ಗುರು ಸಂದೇಶ ಕೇಳಿ ಈ ಜಗತ್ತಿನ ಭವಿಷ್ಯ ನಾನಂದುಕೊಂಡಷ್ಟು ಕರಾಳವಿಲ್ಲ ಅನಿಸಿತು.
ಬೆಂಗಳೂರಿನಲ್ಲಿ ನೆಲಸಿರುವ ಕೇರಳದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಒಕ್ಕೂಟ ಕಳೆದ ಭಾನುವಾರ ೨೫ ನವೆಂಬರ್ ೨೦೦೭ ರಂದು ತಮ್ಮ ವಾರ್ಷಿಕೋತ್ಸವವನ್ನು ಆಚರಿಸಿತು. ಸೆಂಟ್ರಲ್ ಕಾಲೇಜಿನ ಜ್ನಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಸಮಾರಂಭಕ್ಕೆ ಆಹ್ವಾನಿತ ಬೆರಳೆಣಿಕೆಯ ಕನ್ನಡಿಗರಲ್ಲಿ ನಾನೂ ಒಬ್ಬನಾಗಿದ್ದೆ.
ಬರೀ ಮಲಯಾಳಿಗಳಿಂದ ಕಿಕ್ಕಿರಿದಿದ್ದ ಸಭಾಂಗಣ. ಹೆಂಗಸರು ಮಕ್ಕಳಾದಿಯಾಗಿ ಕುಟುಂಬದ ಎಲ್ಲ ಸದಸ್ಯರೂ ಇದ್ದದ್ದರಿಂದ ಸಾಕಷ್ಟು ಗದ್ದಲವಿತ್ತು.
ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಫೋಸಿಸ್ನ ಮುಖ್ಯಸ್ಥ ಶ್ರೀ. ಕ್ರಿಸ್ ಗೋಪಾಲಕ್ರಿಷ್ಣನ್. ಗೌರವ ಅತಿಥಿಗಳಾಗಿ “ಕಾರ್ಟ್ಮನ್” ಎಂದು ವಿಖ್ಯಾತರಾದ ಪ್ರೊ. ಎನ್. ಎಸ್. ರಾಮಸ್ವಾಮಿ ಹಾಗೂ ಅಂದಿನ ಮುಖ್ಯ ಸ್ಪಾನ್ಸರ್ ಶ್ರೀ. ಬಿಜು ಜಾನ್. ಎಲ್ಲರೂ ಯಶಸ್ವಿ ಮಲೆಯಾಳಿಗಳು ಮಾತ್ರ.
ನಿರ್ವಾಹಕರು ಕಾರ್ಯಕ್ರಮವನ್ನು ಮಲಯಾಳಿಯಲ್ಲಿಯೇ ಕಾಂಪೇರ್ ಮಾಡುತ್ತ ನಡೆಸಿಕೊಟ್ಟರೂ, ಸಂಘದ ಅಧ್ಯಕ್ಷ ,ಕಾರ್ಯದರ್ಶಿಗಳು ಮತ್ತು ಮುಖ್ಯ ಅತಿಥಿಗಳಾದ ಕ್ರಿಸ್ ಗೋಪಾಲಕೃಷ್ಣನ್ ಎಲ್ಲರೂ ಇಂಗ್ಲೀಷ್ನಲ್ಲೇ ಭಾಷಣ ಮಾಡಿದರು. ಸ್ವಲ್ಪ ಬೋರಾಗುವಂತಿದ್ದ ಭಾಷಣಗಳನ್ನು ಕೇಳಿ ಸಭಿಕರ ಗದ್ದಲ ಸ್ವಲ್ಪ ನಿಧಾನವಾಗಿ ಏರುವಂತಿತ್ತು.
ಪ್ರೊ. ರಾಮಸ್ವಾಮಿಯವರು ತಮ್ಮ ಭಾಷಣ ಮಾತ್ರ ಮಲಯಾಳಂನಲ್ಲಿಯೇ ಅರಂಭಿಸಿದರು. ನನಗೆ ಅವರ ಭಾಷಣ ನೂರಕ್ಕೆ ನೂರರಷ್ಟು ಅರ್ಥವಾಗದಿದ್ದರೂ, ಒಟ್ಟಾರೆ ಅದರ ಸಾರಂಶವೇನು ಅನ್ನುವುದು ಚೆನ್ನಾಗಿಯೇ ತಿಳಿದುಬಂತು. ಮಲೆಯಾಳಿಗಳು ಎಲ್ಲಿ ಹೋದರು ತಮ್ಮ ಜನರನ್ನು ಒಟ್ಟು ಗೂಡಿಸಿಕೊಳ್ಳುವ ಅಪ್ರತಿಮ ಸಂಘಟನಕಾರರು, ತಾವು ವಲಸೆ ಹೋದ ಬೇರೆ ರಾಜ್ಯ ಅಥವಾ ದೇಶಗಳನ್ನು ತಮ್ಮ ಕಾಯಕ ಕೌಶಲಗಳಿಂದ ಅಭಿವೃಧ್ಧಿ ಮತ್ತು ಉಧ್ಧಾರ ಮಾಡುತ್ತ ತಮ್ಮ ಹುಟ್ಟು ಕೇರಳವನ್ನು ಮಾತ್ರ ಪ್ರಗತಿಯ ಪಥದಲ್ಲಿ ದೂಕಿ “ಹಾಳು ಮಾಡದೆ” ಔದ್ಯೋಗಿಕವಾಗಿ ಹಾಗೂ ಅರ್ಥಿಕವಾಗಿಯೂ ಹಿಂದೆ ಇಟ್ಟಿರುವ ಮಹಾನ್ದೇಶಭಕ್ತರು ಎಂದು ಕುಚೋದ್ಯ ಮಾಡುತ್ತ ತಿಳಿಹಾಸ್ಯದ ನೆರವಿನಿಂದ ಸಭಿಕರ ಮನಸೆಳೆದರು ಪ್ರೊ. ರಾಮಸ್ವಾಮಿಯವರು. ಅವರ ಪ್ರತಿಯೊಂದು ಮಾತಿಗೂ ನಗುತ್ತಿದ್ದ ಮಲಯಾಳಿ ಇಂಜಿನಿಯರ್ ಸಮುದಾಯಕ್ಕೆ ಹಿತವಚನ ನೀಡುತ್ತಿದ್ದಂತೆಯೇ, “ಈ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಕ್ಕೆ ಕೇವಲ ಮಲಯಾಳೀ ಆತಿಥೇಯರನ್ನು ಮಾತ್ರ ಕರೆದು ಆದರಿಸಿದ್ದು ಸರಿಯಲ್ಲ. ನೀವುಗಳು ಇರುವ ನಾಡು ಕರ್ನಾಟಕ. ಕುಡಿಯುವ ನೀರು ಅಲ್ಲಿಯದು. ಕನ್ನಡಿಗರಿಗೆ ನಿಮ್ಮ ಕೃತಜ್ನತೆಯ ಕುರುಹಾಗಿ ಇಂತಹ ಸಮಾರಂಭಗಳಲ್ಲಿ ನೀವು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕನ್ನಡಿಗರನ್ನು ಆಹ್ವಾನಿಸಿ ಆದರಿಸಬೇಕು” ಎಂದು ಮಾರ್ಗದರ್ಶನ ನೀಡಿದರು. “ಮುಂದಿನ ವರ್ಷ ನಾನು ಈ ವೇದಿಕೆಯ ಮೇಲೆ ಕೇವಲ ಕನ್ನಡಿಗ ದಿಗ್ಗಜಗಳನ್ನು ನೋಡುವಹಾಗಿರಬೇಕು” ಎಂದರು. ಬರೀ ಮಲೆಯಾಳಿಗಳೇ ತುಂಬಿದ್ದ ಆ ಸಭೆಯಲ್ಲಿ ತಮ್ಮವರಿಗೇ ನೀಡಿದ ಅವರ ಈ ಸಂದೇಶ ಹೃದಯಪೂರ್ವಕವಾಗಿ ಬಂದು ಅಸ್ವಾರ್ಥತೆಯಿಂದ ತುಂಬಿದ್ದಂತೆ ತೋರಿತು.
ಇವರ ನಂತರ ಮಾತಾನಾಡಿದ ಯುವ ಉದ್ಯಮಿ ಬಿಜು ಜಾನ್ ಕೂಡ ಎಲ್ಲರಿಗೂ ಕನ್ನಡ ಕಲೆತು, ಕನ್ನ್ನಡಿಗರೊಂದಿಗೆ ಬೆರೆತು ಇರುವ ಸಂದೇಶ ನೀಡಿದರು.
ಅಧಿಕಾರ ಮೋಹ- ದಾಹ, ವಚನಭ್ರಷ್ಟತೆ, ಅನೀತಿಯುತ ವಿದ್ಯಮಾನಗಳ ಬಗ್ಗೆಯೇ ಕೇಳುತ್ತಿರುವ ಈ ಕಿವಿಗಳಿಗೆ, ಕೃತಾರ್ಥಭಾವದ ಗುರು ಸಂದೇಶ ಕೇಳಿ ಈ ಜಗತ್ತಿನ ಭವಿಷ್ಯ ನಾನಂದುಕೊಂಡಷ್ಟು ಕರಾಳವಿಲ್ಲ ಅನಿಸಿತು.
“ಯಾದ್ ವಶೇಮ್” - ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ.
- ನವರತ್ನ ಸುಧೀರ್
ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾತಕದಲ್ಲಿ ಅಳಿದ ಲಕ್ಷಾಂತರ ಯಹೂದಿ ಹುತಾತ್ಮರ ಸ್ಮರಣೆ ಹಾಗೂ ಶ್ರಧ್ಧಾಂಜಲಿಯ ಸ್ಮಾರಕವಾಗಿ ಇಸ್ರೇಲ್ ಸರ್ಕಾರ ೧೯೫೩ ರಲ್ಲಿ “ಯಾದ್ ವಶೇಮ್” ಅನ್ನು ಸ್ಥಾಪಿಸಿತು.
“ಯಾದ್ ವಶೇಮ್” ಖ್ಯಾತ ಲೇಖಕಿ ನೇಮಿಚಂದ್ರರವರ ನವನೂತನ ಕಾದಂಬರಿಯ ಹೆಸರು ಕೂಡ. ಅವರ ಮೊದಲೆರಡು ಪುಸ್ತಕಗಳನ್ನು ಓದಿ ನಾನು ಕಳಿಸಿದ ಅಭಿನಂದನಾಪೂರ್ವಕ ಈ ಮೇಲ್ ಮೂಲಕ ಪರಿಚಿತರಾದ ಶ್ರೀಮತಿ ನೇಮಿಚಂದ್ರರವರು, ನಾನು ಕಳಿಸಿದ್ದ ದೀಪಾವಳಿ ಶುಭಾಶಯಕ್ಕೆ ಪ್ರತ್ಯುತ್ತರವಾಗಿ ತಮ್ಮ ಹೊಸ ಕಾದಂಬರಿಯ ಬಗ್ಗೆ ಬರೆದು ಅದನ್ನು ಓದಲು ಪ್ರೇರೇಪಿಸಿದರು.
ಹೋದ ವಾರ ಗಾಂಧೀಬಜಾರ್ ನಲ್ಲಿನ ಅಂಕಿತ ಪುಸ್ತಕದಂಗಡಿಯಲ್ಲಿ ಕೊಂಡುತಂದು ಇದೀಗ ಓದಿ ಮುಗಿಸಿದೆ. ನನ್ನ ಇತಿ ಮಿತಿಗಳ ಅರಿವಿರುವ ನಾನು ಈ ಕಾದಂಬರಿಯನ್ನು ವಿಶ್ಲೇಷಿಸಿ ವಿಮರ್ಶೆಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಓದಿ ಮುಗಿದ ನಂತರ ನನ್ನ ಪ್ರಾಮಾಣಿಕ ಅನಿಸಿಕೆಗಳನ್ನು ಸಂಪದ ಸಮುದಾಯದಲ್ಲಿ ಹಂಚಿಕೊಳ್ಳುವ ಪ್ರಯತ್ನ ಈ ಕಿರುಲೇಖನ.
ಚಿಕ್ಕಂದಿನಿಂದಲೂ ದ್ವಿತೀಯ ಮಹಾಯುಧ್ಧ ಹಾಗೂ ಜರ್ಮನಿಯಲ್ಲಾದ ಹಾಲೋಕಾಸ್ಟ್ ಮಹಾಪಾತಕದ ಬಗ್ಗೆ ಬರೆಯಲ್ಪಟ್ಟ ಅನೇಕ ಪುಸ್ತಕ, ಕಾದಂಬರಿಗಳನ್ನು ಓದಿದ್ದೆ. ಎರಡೂ ವಿಶ್ವ ಸಮರಗಳಲ್ಲಿ ಬ್ರಿಟನ್ನ ಯುಧ್ಧಮಂತ್ರಿಯಾಗಿದ್ದ ಚರ್ಚಿಲ್ರ ದ್ವಿತೀಯ ಸಮರದ ಆರು ಹೊತ್ತಿಗೆಗಳಲ್ಲಿ ಪ್ರಕಟಿತ ಬರಹಗಳು, ಅಮೇರಿಕದ ಯಹೂದಿ ಮೂಲದ ಖ್ಯಾತ ಲೇಖಕರಾಗಿದ್ದ ಮ್ಯಾಕ್ಸ್ ಡಿಮಾಂಟ್, ಲಿಯಾನ್ ಉರಿಸ್ ಇತ್ಯಾದಿಯವರು ಬರೆದ ಪುಸ್ತಕಗಳು, ಕಾದಂಬರಿಗಳನ್ನು ಓದಿದ್ದ, ಮತ್ತು ಈ ವಿಷಯ ಕುರಿತ ಅನೇಕ ಚಲನಚಿತ್ರಗಳನ್ನು ನೋಡಿದ್ದ ನನಗೆ ಆಗ ನಡೆದಿದ್ದ ಘಟನೆಗಳ ಬಗ್ಗೆ ಒಂದು ನಿರ್ದಿಷ್ಟ ನಿಲುವು ರೂಪುಗೊಂಡಿತ್ತು. ಯಹೂದಿಗಳ ನಾಲ್ಕು ಸಾವಿರ ವರ್ಷಗಳ ಇತಿಹಾಸ, ಬೇರೆಯವರ ದಬ್ಬಾಳಿಕೆಯಲ್ಲಿ ಅವರು ಪಟ್ಟ ಕಷ್ಟ ಕಾರ್ಪಣ್ಯಗಳು, ಇವೆಲ್ಲವನ್ನೂ ದಿಟ್ಟತನದಿಂದ ಎದೆಗುಂದದೆ ಎದುರಿಸಿ ಕಾಪಾಡಿಕೊಂಡ ತಮ್ಮ ಸಂಸ್ಕಾರ, ಮತ್ತು ಸಂಸ್ಕೃತಿ, ಶತೃರಾಷ್ಟ್ರಗಳಿಂದ ಸುತ್ತುವರಿದ್ದಿದ್ದರೂ ಇಸ್ರೇಲ್ ದೇಶದ ನಾಗರಿಕರ ಅಸಾಮಾನ್ಯ ಧೈರ್ಯ, ಸ್ಥೈರ್ಯಗಳ ಬಗ್ಗೆ ಬಹಳ ಓದಿದ್ದ ನನಗೆ ಯಹೂದಿ ಜನಾಂಗದ ಬಗ್ಗೆ ಗೌರವಭಾವ ಬೆಳೆದಿತ್ತು. ಆದರೂ ಆಗಾಗ ಭಾವನಾತ್ಮಕವಾಗಿ ನನ್ನ ಮೇಲೆ ಯಹೂದಿಪರ ಏಕಪಕ್ಷೀಯ ಪರಿಣಾಮವಾಗಿದೆಯೇನೋ ಅಂತ ಅನಿಸಿದ್ದುಂಟು. ನನಗೆ ತಿಳಿದಂತೆ ಇದಕ್ಕೆ ವಿರುಧ್ಧ ದೃಷ್ಟಿಕೋಣವನ್ನು ಪ್ರತಿಪಾದಿಸುವ ಸಾಹಿತ್ಯ ಅಥವಾ ಮಾಧ್ಯಮ ಸಾಕಷ್ಟು ಇರಲಿಲ್ಲ ಅಥವಾ ಇದ್ದರೂ ಅಷ್ಟೊಂದು ಜನಜನಿತವಾಗಿರಲಿಲ್ಲ.
ಮೊದಲ ನೋಟಕ್ಕೆ, ಜೆರೂಸಲೆಂನ ಗೋಳುಗೋಡೆ ಮತ್ತು ಮಸೀದಿಯ ವರ್ಣಚಿತ್ರವಿರುವ ನೇಮಿಚಂದ್ರರ ಕಾದಂಬರಿಯ ಮುಖಪುಟ ಬಹಳ ಆಕರ್ಷಕವಾಗಿ ಕಂಡಿತು. ಅಚ್ಚುಕಟ್ಟಾದ ಮುದ್ರಣ. ಯುಧ್ಧ ಮುಗಿದ ಅರವತ್ತು ವರ್ಷಗಳ ನಂತರ ಬಹುಚರ್ಚಿತ ಹಾಲೋಕಾಸ್ಟ್ ಬಗ್ಗೆ ಬೆಂಗಳೂರಿನ ಈ ಇಂಜಿನಿಯರ್ ಲೇಖಕಿ ಅದೇನು ಹೊಸದಾಗಿ ಬರೆದಿರುತ್ತಾರೋ ನೋಡುವಾ ಎಂದು ಸ್ವಲ್ಪ ಸಂಶಯಪೂರಿತ ಕುತೂಹಲದಿಂದಲೆ ಓದಲಾರಂಭಿಸಿದೆ. ಮೊದಲ ಹತ್ತು ಹದಿನೈದು ಪುಟಗಳಲ್ಲೇ ಕಾದಂಬರಿ ನನ್ನನ್ನು ಸೆರೆಹಿಡಿಯಿತು. ನಮ್ಮ ಚಾಮರಾಜಪೇಟೆ, ಗೋರಿಪಾಳ್ಯ, ಸೌತ್ ಪರೇಡ್, ಕೋನೇನ ಅಗ್ರಹಾರಗಳಲ್ಲಿ ಶುರುವಾದ ಕಥೆ ಜರ್ಮನಿಯ ಡಕಾವ್, ಅಲ್ಲಿಂದ ಅಮೇರಿಕ, ಇಸ್ರೇಲ್ನ ಟೆಲ್ ಅವಿವ್ ಮತ್ತು ಜೆರೂಸಲೆಂ ಎಲ್ಲಾ ಸುತ್ತಿಕೊಂಡು ಮರಳಿ ಚಾಮರಾಜಪೇಟೆಯಲ್ಲಿಯೇ ಮುಕ್ತಾಯವಾಯಿತು. ಅಲ್ಲಲ್ಲಿಯೇ ಸೂಕ್ತವಾಗಿ ಮುದ್ರಿಸಿದ ಉಲ್ಲೇಖಿತ ಸ್ಥಳಗಳ, ಮನೆಗಳ ಕಪ್ಪು ಬಿಳುಪು ಛಾಯಾಚಿತ್ರಗಳ ನೆರವಿನಿಂದ ಮನಃಪಟಲದ ಮೇಲಣ ಚಲನಚಿತ್ರವಾಗಿ ತೋರತೊಡಗಿತು. ಅವರ ಸರಳ ಸುಂದರ ಕನ್ನಡ, ವಿವರಣಾ ಶೈಲಿ, ಕಥೆಯಲ್ಲಿ ಬಂದ ಆಕಸ್ಮಿಕ ತಿರುವುಗಳು, ಚಿರಪರಿಚಿತ ನಂಬಲರ್ಹ ಪಾತ್ರಗಳು, ನಲವತ್ತರಲ್ಲಿ ಬೆಳೆಯುತ್ತಿದ್ದ ಬೆಂಗಳೂರಿನ ಔದ್ಯೋಗಿಕ ಇತಿಹಾಸ, ಎಲ್ಲವನ್ನು ಚಾಣಾಕ್ಷತೆಯಿಂದ ಹೆಣೆದ ರೀತಿ ನಿಜಕ್ಕೂ ಪ್ರಶಂಶಾರ್ಹ. ನಾನು ಹಿಂದೆ ಓದಿದ್ದ ನೆವಿಲ್ ಶ್ಯೂಟ್ ಕಾದಂಬರಿಗಳಲ್ಲಿನ ಸಾಧಾರಣ ಭಾವೋದ್ವೇಗಗಳಿರುವ ಹುಲುಮಾನವ ಪಾತ್ರಗಳು ನೆನಪಿಗೆ ಬಂದವು. ಹಾಗೆಯೆ, ಫ್ರೆಡರಿಕ್ ಫೋರ್ಸೈಥ್ ಕಾದಂಬರಿಗಳಂತೆ ಕಾಲಚಕ್ರದಲ್ಲಿ ಹಿಂದಕ್ಕೂ ಮುಂದಕ್ಕೂ ಹೋಗಿಬರುತ್ತ ಕಥೆ ಈಗಿನ ಇಪ್ಪತ್ತೊಂದನೇ ಶತಮಾನಕ್ಕೆ ಬಂದು ಸೇರಿ ಈಗಿನ ವಿದ್ಯಮಾನಗಳನ್ನು ಆ ಹಳೆಯ ಇತಿಹಾಸದ ಬೆಳಕಿನಲ್ಲಿನೋಡುವ ಪ್ರಯತ್ನ ಮಾಡುತ್ತದೆ. ನಾನು ಕಾದಂಬರಿಯ ಕಥೆಯನ್ನು ಹೇಳಿ ಓದುಗರ ಸ್ವಾರಸ್ಯವನ್ನು ಕಡಿಮೆ ಮಾಡಬಯಸುವುದಿಲ್ಲ.
ನನಗೆ ಬಹಳ ಮೆಚ್ಚಿಗೆಯಾದ ಅಂಶ ಉತ್ತರಾರ್ಧದಲ್ಲಿ ಕಾದಂಬರಿಯ ನಾಯಿಕೆಯ ಮನಸ್ಸಿನಾಳದ ಚಿಂತನ. ಮೊದಮೊದಲು ವಿಧಿಯ ಹೊಡೆತಕ್ಕೆ ಸಿಕ್ಕಿ ದಿಕಾಪಾಲಾಗಿದ್ದ ಹೆಣ್ಣೊಬ್ಬಳು, ಹೊರದೇಶದಲ್ಲಿ ಕಷ್ಟದ ಕುಲುಮೆಯಲ್ಲಿ ಬೆಂದರೂ ಧೃತಿಗೆಡದೆ, ಸುತ್ತಲಿನವರ ನಿರಪೇಕ್ಷ, ನಿಷ್ಕಾಮ ಪ್ರೀತಿ ವಾತ್ಸಲ್ಯಗಳ ನೆರವಿನಿಂದ ತನ್ನತನ ಕಂಡುಕೊಳ್ಳುತ್ತಾಳೆ. ತನ್ನವರ ಬಗ್ಗೆ ಅಪಾರ ಪ್ರೀತಿ ಅನುಕಂಪ ಇದ್ದಾಗ್ಯೂ, ಯಾವ ಭಾವಾತ್ಮಕ ಒತ್ತಡಕ್ಕೂ ಈಡಾಗದೆ ಯಾವ ಒಂದು ಪೂರ್ವಗ್ರಹವಿಲ್ಲದೆ, ಏಕಪಕ್ಷೀಯವಾಗಿಲ್ಲದ ತಾರ್ಕಿಕವಾದ ಒಂದು ದಿಟ್ಟ ನಿಲುವು ತಳಿಯುತ್ತಾಳೆ. ಯಹೂದಿಯಾದರೂ ತನ್ನವರ ನಂಬಿಕೆ, ತಾತ್ವಿಕ ನಿಲುವು, ಬೇರೆಯವರ ಬಗ್ಗೆ ಅವರ ನಡತೆ, ವರ್ತನೆ, ಯಾವುದೂ ಪ್ರಶ್ನಾತೀತವಲ್ಲ ಅವಳಿಗೆ.
ನೇಮಿಚಂದ್ರರವರಿಗೆ ಇತಿಹಾಸ ಒಂದು ನೆಪಮಾತ್ರ. ಬೇರೆ ಅನೇಕ ಕಾದಂಬರಿಗಳಂತೆ ಯಾವುದೋ ಒಂದು ಜಾಡು ಹಿಡಿದು, ಕಾದಂಬರಿಕಾರರ ಪೂರ್ವಗ್ರಹಗಳನ್ನು ಓದುಗರ ಮೇಲೆ ಹೇರುವ ಪ್ರಯತ್ನವಿಲ್ಲ. ಓದುಗರನ್ನು ಸಕಾರಾತ್ಮಕವಾಗಿ ಚಿಂತಿಸಲು ಪ್ರಚೋದಿಸುವ ಪ್ರಾಮಾಣಿಕ ಪ್ರಯತ್ನ ಈ ಕಾದಂಬರಿಯದು ಅಂತ ನನ್ನ ಅನಿಸಿಕೆ.
ಕಥೆಯ ಬೆನ್ನು ಹತ್ತಿ ಇವರು ಮಾಡಿದ ಸಂಶೋಧನೆ, ಸ್ವಂತ ಹಣ ಖರ್ಚುಮಾಡಿ ಕಥೆ ನಡೆಯುವ ಬೇರೆ ಬೇರೆ ಖಂಡಗಳ ಪ್ರತಿಯೊಂದು ನಗರಗಳಿಗೂ, ಸ್ಥಳಗಳಿಗೂ ಭೇಟಿಯಿತ್ತು, ಅಲ್ಲಿಯ ಜನರನ್ನು ಹುಡುಕಿ ಸಂದರ್ಶಿಸಿ, ಅಂತರ್ಜಾಲದಲ್ಲಿ ತಡಕಾಡಿ, ಅನೇಕ ಪುಸ್ತಕ, ಹೊತ್ತಿಗೆಗಳನ್ನು ಓದಿ ಎಲ್ಲವೂ “ ಆಥೆಂಟಿಕ್” ಆಗಿರಬೇಕೆಂಬ ಹಟ ಸಾಧಿಸಿ ತೋರಿಸಿದ ಇವರ ಪ್ರಯತ್ನ ನಿಜಕ್ಕೂ ಅಚ್ಚರಿ ತರಿಸುವಂಥಾದ್ದು. ಎಚ್. ಎ. ಎಲ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡು, ಸಂಸಾರ ಮತ್ತು ವೃತ್ತಿಜೀವನದ ಸಾಮರಸ್ಯ ಕಾಪಾಡಿಕೊಳ್ಳುತ್ತ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಾರ್ಯ ಅಸಾಧಾರಣವಲ್ಲದೆ ಮತ್ತೇನು?
ನವಕರ್ನಾಟಕ ಪ್ರಕಾಶನದ ಈ ಕಾದಂಬರಿ ಓದಿ ನೋಡಿ ಅಂತ ಆಗ್ರಹಿಸಲು ನನಗೆ ಸ್ವಲ್ಪವೂ ಸಂಕೋಚವಿಲ್ಲ.
( ಮೇಲ್ಕಂಡ ಪುಸ್ತಕ ಪರಿಚಯ ಮೊದಲು ಬಾರಿ "ಸಂಪದ" -ಅಂತರ್ಜಾಲ -ಪತ್ರಿಕೆಯಲ್ಲಿ ೨೨-೧೨-೨೦೦೭ರಂದು ಪ್ರಕಟವಾಯಿತು. http://sampada.net/article/6756 )
ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾತಕದಲ್ಲಿ ಅಳಿದ ಲಕ್ಷಾಂತರ ಯಹೂದಿ ಹುತಾತ್ಮರ ಸ್ಮರಣೆ ಹಾಗೂ ಶ್ರಧ್ಧಾಂಜಲಿಯ ಸ್ಮಾರಕವಾಗಿ ಇಸ್ರೇಲ್ ಸರ್ಕಾರ ೧೯೫೩ ರಲ್ಲಿ “ಯಾದ್ ವಶೇಮ್” ಅನ್ನು ಸ್ಥಾಪಿಸಿತು.
“ಯಾದ್ ವಶೇಮ್” ಖ್ಯಾತ ಲೇಖಕಿ ನೇಮಿಚಂದ್ರರವರ ನವನೂತನ ಕಾದಂಬರಿಯ ಹೆಸರು ಕೂಡ. ಅವರ ಮೊದಲೆರಡು ಪುಸ್ತಕಗಳನ್ನು ಓದಿ ನಾನು ಕಳಿಸಿದ ಅಭಿನಂದನಾಪೂರ್ವಕ ಈ ಮೇಲ್ ಮೂಲಕ ಪರಿಚಿತರಾದ ಶ್ರೀಮತಿ ನೇಮಿಚಂದ್ರರವರು, ನಾನು ಕಳಿಸಿದ್ದ ದೀಪಾವಳಿ ಶುಭಾಶಯಕ್ಕೆ ಪ್ರತ್ಯುತ್ತರವಾಗಿ ತಮ್ಮ ಹೊಸ ಕಾದಂಬರಿಯ ಬಗ್ಗೆ ಬರೆದು ಅದನ್ನು ಓದಲು ಪ್ರೇರೇಪಿಸಿದರು.
ಹೋದ ವಾರ ಗಾಂಧೀಬಜಾರ್ ನಲ್ಲಿನ ಅಂಕಿತ ಪುಸ್ತಕದಂಗಡಿಯಲ್ಲಿ ಕೊಂಡುತಂದು ಇದೀಗ ಓದಿ ಮುಗಿಸಿದೆ. ನನ್ನ ಇತಿ ಮಿತಿಗಳ ಅರಿವಿರುವ ನಾನು ಈ ಕಾದಂಬರಿಯನ್ನು ವಿಶ್ಲೇಷಿಸಿ ವಿಮರ್ಶೆಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಓದಿ ಮುಗಿದ ನಂತರ ನನ್ನ ಪ್ರಾಮಾಣಿಕ ಅನಿಸಿಕೆಗಳನ್ನು ಸಂಪದ ಸಮುದಾಯದಲ್ಲಿ ಹಂಚಿಕೊಳ್ಳುವ ಪ್ರಯತ್ನ ಈ ಕಿರುಲೇಖನ.
ಚಿಕ್ಕಂದಿನಿಂದಲೂ ದ್ವಿತೀಯ ಮಹಾಯುಧ್ಧ ಹಾಗೂ ಜರ್ಮನಿಯಲ್ಲಾದ ಹಾಲೋಕಾಸ್ಟ್ ಮಹಾಪಾತಕದ ಬಗ್ಗೆ ಬರೆಯಲ್ಪಟ್ಟ ಅನೇಕ ಪುಸ್ತಕ, ಕಾದಂಬರಿಗಳನ್ನು ಓದಿದ್ದೆ. ಎರಡೂ ವಿಶ್ವ ಸಮರಗಳಲ್ಲಿ ಬ್ರಿಟನ್ನ ಯುಧ್ಧಮಂತ್ರಿಯಾಗಿದ್ದ ಚರ್ಚಿಲ್ರ ದ್ವಿತೀಯ ಸಮರದ ಆರು ಹೊತ್ತಿಗೆಗಳಲ್ಲಿ ಪ್ರಕಟಿತ ಬರಹಗಳು, ಅಮೇರಿಕದ ಯಹೂದಿ ಮೂಲದ ಖ್ಯಾತ ಲೇಖಕರಾಗಿದ್ದ ಮ್ಯಾಕ್ಸ್ ಡಿಮಾಂಟ್, ಲಿಯಾನ್ ಉರಿಸ್ ಇತ್ಯಾದಿಯವರು ಬರೆದ ಪುಸ್ತಕಗಳು, ಕಾದಂಬರಿಗಳನ್ನು ಓದಿದ್ದ, ಮತ್ತು ಈ ವಿಷಯ ಕುರಿತ ಅನೇಕ ಚಲನಚಿತ್ರಗಳನ್ನು ನೋಡಿದ್ದ ನನಗೆ ಆಗ ನಡೆದಿದ್ದ ಘಟನೆಗಳ ಬಗ್ಗೆ ಒಂದು ನಿರ್ದಿಷ್ಟ ನಿಲುವು ರೂಪುಗೊಂಡಿತ್ತು. ಯಹೂದಿಗಳ ನಾಲ್ಕು ಸಾವಿರ ವರ್ಷಗಳ ಇತಿಹಾಸ, ಬೇರೆಯವರ ದಬ್ಬಾಳಿಕೆಯಲ್ಲಿ ಅವರು ಪಟ್ಟ ಕಷ್ಟ ಕಾರ್ಪಣ್ಯಗಳು, ಇವೆಲ್ಲವನ್ನೂ ದಿಟ್ಟತನದಿಂದ ಎದೆಗುಂದದೆ ಎದುರಿಸಿ ಕಾಪಾಡಿಕೊಂಡ ತಮ್ಮ ಸಂಸ್ಕಾರ, ಮತ್ತು ಸಂಸ್ಕೃತಿ, ಶತೃರಾಷ್ಟ್ರಗಳಿಂದ ಸುತ್ತುವರಿದ್ದಿದ್ದರೂ ಇಸ್ರೇಲ್ ದೇಶದ ನಾಗರಿಕರ ಅಸಾಮಾನ್ಯ ಧೈರ್ಯ, ಸ್ಥೈರ್ಯಗಳ ಬಗ್ಗೆ ಬಹಳ ಓದಿದ್ದ ನನಗೆ ಯಹೂದಿ ಜನಾಂಗದ ಬಗ್ಗೆ ಗೌರವಭಾವ ಬೆಳೆದಿತ್ತು. ಆದರೂ ಆಗಾಗ ಭಾವನಾತ್ಮಕವಾಗಿ ನನ್ನ ಮೇಲೆ ಯಹೂದಿಪರ ಏಕಪಕ್ಷೀಯ ಪರಿಣಾಮವಾಗಿದೆಯೇನೋ ಅಂತ ಅನಿಸಿದ್ದುಂಟು. ನನಗೆ ತಿಳಿದಂತೆ ಇದಕ್ಕೆ ವಿರುಧ್ಧ ದೃಷ್ಟಿಕೋಣವನ್ನು ಪ್ರತಿಪಾದಿಸುವ ಸಾಹಿತ್ಯ ಅಥವಾ ಮಾಧ್ಯಮ ಸಾಕಷ್ಟು ಇರಲಿಲ್ಲ ಅಥವಾ ಇದ್ದರೂ ಅಷ್ಟೊಂದು ಜನಜನಿತವಾಗಿರಲಿಲ್ಲ.
ಮೊದಲ ನೋಟಕ್ಕೆ, ಜೆರೂಸಲೆಂನ ಗೋಳುಗೋಡೆ ಮತ್ತು ಮಸೀದಿಯ ವರ್ಣಚಿತ್ರವಿರುವ ನೇಮಿಚಂದ್ರರ ಕಾದಂಬರಿಯ ಮುಖಪುಟ ಬಹಳ ಆಕರ್ಷಕವಾಗಿ ಕಂಡಿತು. ಅಚ್ಚುಕಟ್ಟಾದ ಮುದ್ರಣ. ಯುಧ್ಧ ಮುಗಿದ ಅರವತ್ತು ವರ್ಷಗಳ ನಂತರ ಬಹುಚರ್ಚಿತ ಹಾಲೋಕಾಸ್ಟ್ ಬಗ್ಗೆ ಬೆಂಗಳೂರಿನ ಈ ಇಂಜಿನಿಯರ್ ಲೇಖಕಿ ಅದೇನು ಹೊಸದಾಗಿ ಬರೆದಿರುತ್ತಾರೋ ನೋಡುವಾ ಎಂದು ಸ್ವಲ್ಪ ಸಂಶಯಪೂರಿತ ಕುತೂಹಲದಿಂದಲೆ ಓದಲಾರಂಭಿಸಿದೆ. ಮೊದಲ ಹತ್ತು ಹದಿನೈದು ಪುಟಗಳಲ್ಲೇ ಕಾದಂಬರಿ ನನ್ನನ್ನು ಸೆರೆಹಿಡಿಯಿತು. ನಮ್ಮ ಚಾಮರಾಜಪೇಟೆ, ಗೋರಿಪಾಳ್ಯ, ಸೌತ್ ಪರೇಡ್, ಕೋನೇನ ಅಗ್ರಹಾರಗಳಲ್ಲಿ ಶುರುವಾದ ಕಥೆ ಜರ್ಮನಿಯ ಡಕಾವ್, ಅಲ್ಲಿಂದ ಅಮೇರಿಕ, ಇಸ್ರೇಲ್ನ ಟೆಲ್ ಅವಿವ್ ಮತ್ತು ಜೆರೂಸಲೆಂ ಎಲ್ಲಾ ಸುತ್ತಿಕೊಂಡು ಮರಳಿ ಚಾಮರಾಜಪೇಟೆಯಲ್ಲಿಯೇ ಮುಕ್ತಾಯವಾಯಿತು. ಅಲ್ಲಲ್ಲಿಯೇ ಸೂಕ್ತವಾಗಿ ಮುದ್ರಿಸಿದ ಉಲ್ಲೇಖಿತ ಸ್ಥಳಗಳ, ಮನೆಗಳ ಕಪ್ಪು ಬಿಳುಪು ಛಾಯಾಚಿತ್ರಗಳ ನೆರವಿನಿಂದ ಮನಃಪಟಲದ ಮೇಲಣ ಚಲನಚಿತ್ರವಾಗಿ ತೋರತೊಡಗಿತು. ಅವರ ಸರಳ ಸುಂದರ ಕನ್ನಡ, ವಿವರಣಾ ಶೈಲಿ, ಕಥೆಯಲ್ಲಿ ಬಂದ ಆಕಸ್ಮಿಕ ತಿರುವುಗಳು, ಚಿರಪರಿಚಿತ ನಂಬಲರ್ಹ ಪಾತ್ರಗಳು, ನಲವತ್ತರಲ್ಲಿ ಬೆಳೆಯುತ್ತಿದ್ದ ಬೆಂಗಳೂರಿನ ಔದ್ಯೋಗಿಕ ಇತಿಹಾಸ, ಎಲ್ಲವನ್ನು ಚಾಣಾಕ್ಷತೆಯಿಂದ ಹೆಣೆದ ರೀತಿ ನಿಜಕ್ಕೂ ಪ್ರಶಂಶಾರ್ಹ. ನಾನು ಹಿಂದೆ ಓದಿದ್ದ ನೆವಿಲ್ ಶ್ಯೂಟ್ ಕಾದಂಬರಿಗಳಲ್ಲಿನ ಸಾಧಾರಣ ಭಾವೋದ್ವೇಗಗಳಿರುವ ಹುಲುಮಾನವ ಪಾತ್ರಗಳು ನೆನಪಿಗೆ ಬಂದವು. ಹಾಗೆಯೆ, ಫ್ರೆಡರಿಕ್ ಫೋರ್ಸೈಥ್ ಕಾದಂಬರಿಗಳಂತೆ ಕಾಲಚಕ್ರದಲ್ಲಿ ಹಿಂದಕ್ಕೂ ಮುಂದಕ್ಕೂ ಹೋಗಿಬರುತ್ತ ಕಥೆ ಈಗಿನ ಇಪ್ಪತ್ತೊಂದನೇ ಶತಮಾನಕ್ಕೆ ಬಂದು ಸೇರಿ ಈಗಿನ ವಿದ್ಯಮಾನಗಳನ್ನು ಆ ಹಳೆಯ ಇತಿಹಾಸದ ಬೆಳಕಿನಲ್ಲಿನೋಡುವ ಪ್ರಯತ್ನ ಮಾಡುತ್ತದೆ. ನಾನು ಕಾದಂಬರಿಯ ಕಥೆಯನ್ನು ಹೇಳಿ ಓದುಗರ ಸ್ವಾರಸ್ಯವನ್ನು ಕಡಿಮೆ ಮಾಡಬಯಸುವುದಿಲ್ಲ.
ನನಗೆ ಬಹಳ ಮೆಚ್ಚಿಗೆಯಾದ ಅಂಶ ಉತ್ತರಾರ್ಧದಲ್ಲಿ ಕಾದಂಬರಿಯ ನಾಯಿಕೆಯ ಮನಸ್ಸಿನಾಳದ ಚಿಂತನ. ಮೊದಮೊದಲು ವಿಧಿಯ ಹೊಡೆತಕ್ಕೆ ಸಿಕ್ಕಿ ದಿಕಾಪಾಲಾಗಿದ್ದ ಹೆಣ್ಣೊಬ್ಬಳು, ಹೊರದೇಶದಲ್ಲಿ ಕಷ್ಟದ ಕುಲುಮೆಯಲ್ಲಿ ಬೆಂದರೂ ಧೃತಿಗೆಡದೆ, ಸುತ್ತಲಿನವರ ನಿರಪೇಕ್ಷ, ನಿಷ್ಕಾಮ ಪ್ರೀತಿ ವಾತ್ಸಲ್ಯಗಳ ನೆರವಿನಿಂದ ತನ್ನತನ ಕಂಡುಕೊಳ್ಳುತ್ತಾಳೆ. ತನ್ನವರ ಬಗ್ಗೆ ಅಪಾರ ಪ್ರೀತಿ ಅನುಕಂಪ ಇದ್ದಾಗ್ಯೂ, ಯಾವ ಭಾವಾತ್ಮಕ ಒತ್ತಡಕ್ಕೂ ಈಡಾಗದೆ ಯಾವ ಒಂದು ಪೂರ್ವಗ್ರಹವಿಲ್ಲದೆ, ಏಕಪಕ್ಷೀಯವಾಗಿಲ್ಲದ ತಾರ್ಕಿಕವಾದ ಒಂದು ದಿಟ್ಟ ನಿಲುವು ತಳಿಯುತ್ತಾಳೆ. ಯಹೂದಿಯಾದರೂ ತನ್ನವರ ನಂಬಿಕೆ, ತಾತ್ವಿಕ ನಿಲುವು, ಬೇರೆಯವರ ಬಗ್ಗೆ ಅವರ ನಡತೆ, ವರ್ತನೆ, ಯಾವುದೂ ಪ್ರಶ್ನಾತೀತವಲ್ಲ ಅವಳಿಗೆ.
ನೇಮಿಚಂದ್ರರವರಿಗೆ ಇತಿಹಾಸ ಒಂದು ನೆಪಮಾತ್ರ. ಬೇರೆ ಅನೇಕ ಕಾದಂಬರಿಗಳಂತೆ ಯಾವುದೋ ಒಂದು ಜಾಡು ಹಿಡಿದು, ಕಾದಂಬರಿಕಾರರ ಪೂರ್ವಗ್ರಹಗಳನ್ನು ಓದುಗರ ಮೇಲೆ ಹೇರುವ ಪ್ರಯತ್ನವಿಲ್ಲ. ಓದುಗರನ್ನು ಸಕಾರಾತ್ಮಕವಾಗಿ ಚಿಂತಿಸಲು ಪ್ರಚೋದಿಸುವ ಪ್ರಾಮಾಣಿಕ ಪ್ರಯತ್ನ ಈ ಕಾದಂಬರಿಯದು ಅಂತ ನನ್ನ ಅನಿಸಿಕೆ.
ಕಥೆಯ ಬೆನ್ನು ಹತ್ತಿ ಇವರು ಮಾಡಿದ ಸಂಶೋಧನೆ, ಸ್ವಂತ ಹಣ ಖರ್ಚುಮಾಡಿ ಕಥೆ ನಡೆಯುವ ಬೇರೆ ಬೇರೆ ಖಂಡಗಳ ಪ್ರತಿಯೊಂದು ನಗರಗಳಿಗೂ, ಸ್ಥಳಗಳಿಗೂ ಭೇಟಿಯಿತ್ತು, ಅಲ್ಲಿಯ ಜನರನ್ನು ಹುಡುಕಿ ಸಂದರ್ಶಿಸಿ, ಅಂತರ್ಜಾಲದಲ್ಲಿ ತಡಕಾಡಿ, ಅನೇಕ ಪುಸ್ತಕ, ಹೊತ್ತಿಗೆಗಳನ್ನು ಓದಿ ಎಲ್ಲವೂ “ ಆಥೆಂಟಿಕ್” ಆಗಿರಬೇಕೆಂಬ ಹಟ ಸಾಧಿಸಿ ತೋರಿಸಿದ ಇವರ ಪ್ರಯತ್ನ ನಿಜಕ್ಕೂ ಅಚ್ಚರಿ ತರಿಸುವಂಥಾದ್ದು. ಎಚ್. ಎ. ಎಲ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡು, ಸಂಸಾರ ಮತ್ತು ವೃತ್ತಿಜೀವನದ ಸಾಮರಸ್ಯ ಕಾಪಾಡಿಕೊಳ್ಳುತ್ತ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಾರ್ಯ ಅಸಾಧಾರಣವಲ್ಲದೆ ಮತ್ತೇನು?
ನವಕರ್ನಾಟಕ ಪ್ರಕಾಶನದ ಈ ಕಾದಂಬರಿ ಓದಿ ನೋಡಿ ಅಂತ ಆಗ್ರಹಿಸಲು ನನಗೆ ಸ್ವಲ್ಪವೂ ಸಂಕೋಚವಿಲ್ಲ.
( ಮೇಲ್ಕಂಡ ಪುಸ್ತಕ ಪರಿಚಯ ಮೊದಲು ಬಾರಿ "ಸಂಪದ" -ಅಂತರ್ಜಾಲ -ಪತ್ರಿಕೆಯಲ್ಲಿ ೨೨-೧೨-೨೦೦೭ರಂದು ಪ್ರಕಟವಾಯಿತು. http://sampada.net/article/6756 )
Labels:
ಗೋರಿಪಾಳ್ಯ,
ಚಾಮರಾಜಪೇಟೆ,
ನೆಮಿಚಂದ್ರ,
ಯಹೂದಿ,
ಯಾದ್ ವಶೇಮ್,
ಹಾಲೋಕಾಸ್ಟ್
Friday, 23 November 2007
ಟ್ವೆಂಟಿ ಟ್ವೆಂಟಿ ವರ್ಲ್ಡ್ ಕಪ್ ವಿಜಯಾನಂತರ ರವಿ ಶಾಸ್ತ್ರಿ ಧೋಣಿ ಸಂದರ್ಶನ -
( ಮೂಲ - ಇಂಗ್ಲೀಷ್ನಲ್ಲಿ ಶ್ರೀ ಎಸ್. ಆರ್.ಪಂಢರಿನಾಥ್ ರವರ ಲೇಖನದ ಭಾವಾನುವಾದ)
- ನವರತ್ನ ಸುಧೀರ್
ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ.
ರ: ಧೋಣಿ, ವಿಶ್ವ ಕಪ್ ಗೆದ್ದ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು. ನೀವುಗಳು ನಿಜಕ್ಕೂ ಉಗುರುಕಚ್ಚುವಷ್ಟು
ರೋಚಕ ರೀತಿಯಲ್ಲಿ ಪಂದ್ಯ ಗೆದ್ದಿರಿ. ನಿಮ್ಮ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳಿ ಬನ್ನಿ!”
ಧೋ: ಧನ್ಯವಾದ ರವಿ, ಪಂದ್ಯದ ಕೊನೆ ನಿಜಕ್ಕೂ ರೋಮಾಂಚಕವಾಗಿತ್ತು. ನಮ್ಮ ಹುಡುಗರು ಕೊನೆಯವರೆಗೂ
ಧೈರ್ಯಗುಂದಲಿಲ್ಲ. ಅದೇ ಕಾರಣದಿಂದ ನಾವು ಕಪ್ ಗೆದ್ದದ್ದು.
ರ: ನಿಮ್ಮ ಅಭಿಪ್ರಾಯದಲ್ಲಿ ನಿಮ್ಮ ಈ ವಿಜಯಕ್ಕೆ ಮುಖ್ಯ ಕಾರಣ ಯಾರು?
ಧೋ: ನಾವೆಲ್ಲರೂ ಚೆನ್ನಾಗಿಯೇ ಆಡಿದ್ದೆವು. ಆದರೆ ನನ್ನ ಅಭಿಪ್ರಾಯದಲ್ಲಿ ಪಂದ್ಯ ಗೆಲ್ಲಲು ಮುಖ್ಯ ಕಾರಣರಾದವರು
ಅಜಿತ್ ಅಗರ್ಕರ್.
ರ: (ಕಕ್ಕಾಬಿಕ್ಕಿಯಾಗಿ) ಅಜಿತ್ ಅಗರ್ಕರ್!!! ಅವರು ಫೈನಲ್ನಲ್ಲಿ ಆಡಲೇ ಇಲ್ಲವಲ್ಲ!!!!
ಧೋ: ಅದಕ್ಕೇ ಹೇಳಿದ್ದು. ಅಷ್ಟು ಕಡಿಮೆ ಸ್ಕೋರಿನ ಮ್ಯಾಚ್ನಲ್ಲಿ ಅವರೇನಾದರೂ ಆಡಿದ್ದರೆ, ಅವರ ನಾಲ್ಕು ಓವರ್ಗಳಲ್ಲಿ
ಖಂಡಿತ ಭರ್ಜರಿ ರನ್ ಮಾಡಿ ಪಾಕಿಸ್ತಾನ ಗೆಲ್ಲೋದು ಖಚಿತವಾಗುತ್ತಿತ್ತು.
ರ: (ಉಗುಳು ನುಂಗಿ) ಸರಿ.. ಸರಿ..ಈ ವಿಜಯಕ್ಕಾಗಿ ನೀವು ಮತ್ತೆ ಯಾರಿಗೆ ಧನ್ಯವಾದ ಕೊಡಲಿಚ್ಚಿಸುತ್ತೀರಿ?
ಧೋ: ನಮ್ಮೆಲ್ಲರ ಧನ್ಯವಾದಗಳು ಮೊದಲು ನಮ್ಮ ಟೀಮ್ ಡಾಕ್ಟರ್ರವರಿಗೇ ಸಲ್ಲಬೇಕು. ನಮ್ಮ ಫೈನಲ್ ಮುನ್ನ
ತಯಾರಿಗೆ ಅವರು ಸಲ್ಲಿಸಿದ ಸೇವೆ ಅಮೋಘ!
ರ: (ತಬ್ಬಿಬ್ಬಾಗಿ) ನನಗಿದ್ಯಾಕೋ ಅರ್ಥವಾಗಿಲ್ಲ. ಕನ್ಫ್ಯೂಸ್ ಆಗ್ತಿದೆ. ನಿಮ್ಮ ಡಾಕ್ಟರ್ ಅದೇನು ಸಹಾಯ ಮಾಡಿದರು?
ನಿಮ್ಮ ಕೋಚ್ ಅಥವಾ ಫಿಷಿಯೋ ಸಹಾಯ ಅಂದರೆ ಒಪ್ಪಿಕೋಬಹುದು… ಆದರೇ….
ಧೋ: (ಅಡ್ಡ ಬಾಯಿ ಹಾಕುತ್ತ) ಇದರಲ್ಲಿ ಕನ್ಫ್ಯೂಸ್ ಆಗೋ ಮಾತೇನಿದೆ? ಅವರು ಸೆಹ್ವಾಗ್ನನ್ನು ಫಿಟ್ನೆಸ್
ಟೆಸ್ಟ್ನಲ್ಲಿ ಫೇಲ್ ಮಾಡಿದ್ದೆ ನಮ್ಮ ಟೀಮ್ಗೆ ಕೊಟ್ಟ ಅಮೋಘ ಅನುದಾನ. ನಾವೆಲ್ಲರೂ ಮೈದಾನದಲ್ಲಿ ಮಾಡಿದ್ದಕ್ಕಿಂತಲೂ
ಹೆಚ್ಚಿನ ಶ್ರೇಯ ಅವರಿಗೇ ಹೋಗಬೇಕು. ಅವರು ನಮ್ಮ ಟೀಮ್ನ ಟ್ಯಾಕ್ಟಿಕ್ಸ್ನ ಮುಖ್ಯ ಭಾಗ.
ರ: (ತಲೆ ಕೊಡವುತ್ತ) ಹೂಂ! ಹೋಗಲಿ ಬಿಡಿ! ಈ ನಿಮ್ಮ ವಿಜಯದ ಸಂಕೇತವಾದ ಕಪ್ ಯಾರಿಗೆ ಡೆಡಿಕೇಟ್ ಮಾಡ್ತೀರಿ?
ಧೋ: ನಾನು ಮತ್ತು ನಮ್ಮ ತಂಡದ ಪ್ರತಿಯೊಬ್ಬ ಸದಸ್ಯನೂ ಕೂಡ ಒಮ್ಮತದಿಂದ ಈ ಕಪ್ ಅನ್ನು ಸಚಿನ್, ಗಂಗೂಲಿ
ಮತ್ತು ಡ್ರಾವಿಡ್ರವರಿಗೆ……..
ರ: (ಮಧ್ಯೆ ಬಾಯಿ ಹಾಕುತ್ತ) ನಿಜವಾಗಿಯೂ ನೀವುಗಳು ಬಹಳ ಪ್ರಶಂಸಾರ್ಹರು. ನಿಮಗೆಲ್ಲ ನಿಮ್ಮ ಹಿರಿಯರ ಬಗ್ಗೆ ಇಷ್ಟು
ಗೌರವ ಮತ್ತು ಅಭಿಮಾನವಿರುವುದು ಕಂಡು……..
ಧೋ: ಸ್ವಲ್ಪ ತಡೆಯಿರಿ ರವಿ! ನಾನು ಹೇಳುವುದನ್ನು ಪೂರ್ತಿ ಕೇಳಿಸಿಕೊಳ್ಳಿ! ಅವರೇನಾದರೂ ಈ ಪಂದ್ಯಾವಳಿಯಲ್ಲಿ
ಆಡಿದ್ದಿದ್ದರೆ ನಾವು ಮೊದಲನೇ ಸುತ್ತಿನಲ್ಲೇ ಮನೆಯ ಮುಖ ನೋಡುತ್ತಿದ್ದೆವು. ಅವರುಗಳು ತಾವಾಗಿಯೆ ಈ
ಪಂದ್ಯಾವಳಿಯಲ್ಲಿ ಆಡದಿರಲು ನಿರ್ಧಾರ ತೆಗೆದುಕೊಂಡದ್ದಕ್ಕೆ ನಾವೆಲ್ಲರೂ ಭಗವಂತನಿಗೆ ವಂದಿಸಬೇಕು. ಅವರ
ರಾಜಕೀಯವಿಲ್ಲದ ಕಾರಣ ನಮಗೆಲ್ಲರಿಗೂ ಕ್ರಿಕೆಟ್ ಉತ್ತಮವಾಗಿ ಆಡಿ ಕಪ್ ಗೆಲ್ಲಲು ಸಾಧ್ಯವಾಯಿತು.
ರ: ಹೋಗಲಿ ಬಿಡಿ. ಅಂತೂ ಪಂದ್ಯ ಕೊನೆಯ ಓವರ್ವರೆಗೂ ಬಹಳ ರೋಚಕವಾಗಿತ್ತು. ಕೊನೆಯಲ್ಲಿ ಪಾಕಿಸ್ತಾನದ
ಮಿಸ್ಬಾಹ್ ಮಾಡಿದ ಸಣ್ಣದೊಂದು ತಪ್ಪಿನಿಂದಾಗಿ ಕಪ್ ನಮ್ಮ ವಶವಾಯಿತು.
ಧೋ: ಸಣ್ಣದೊಂದು ತಪ್ಪು? ಇದೇನು ಹೀಗೆ ಹೇಳುತ್ತೀರಿ ರವಿ! ಆ ಶಾಟ್ ಹೊಡೆದ ಕೂದಲೆ ಆ ಮಿಸ್ಬಾಹ್ ನನಗೆ ಹೇಳಿದ
ಮಾತು -ನೋಡೋ ಧೋಣಿ. ನಾನು ಯಾರೂ ಇಲ್ಲದ ಕಡೆ ಯಲ್ಲಿ ಶಾಟ್ ಹೊಡೆದಿದ್ದೇನೆ ! ಅಂತ. ಪಾಪ ಆ
ಮುಂಡೇದರ ಮಹಾ ತಪ್ಪು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಮಲೆಯಾಳಿಗಳಿರುತ್ತಾರೆ ಅನ್ನುವುದನ್ನು ಮರೆತದ್ದು!
ಈ ಎಕ್ಸ್ಪ್ಲನೇಷನ್ ಕೇಳುತ್ತಿದ್ದಂತೆಯೇ ಸಂದರ್ಶಕ ರವಿ ಶಾಸ್ತ್ರಿ ಜ್ನಾನ ತಪ್ಪಿ ಕೆಳಗುರುಳಿದ. ಧೋಣಿ ಕಪ್ ಎತ್ತಿಕೊಂಡು ಮುನ್ನಡೆದ ಜಂಬದ ಕೋಳಿಯ ರೀತಿಯಲಿ.
*************
( ಈ ಸಂದರ್ಶನ ಬಹಳ ಹಿಂದೆ ಅಕ್ಟೋಬರ್ ೩ ನೇ ತಾರೀಕು "ಸಂಪದ " ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿತ್ತು.) http://sampada.net/article/5838
- ನವರತ್ನ ಸುಧೀರ್
ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ.
ರ: ಧೋಣಿ, ವಿಶ್ವ ಕಪ್ ಗೆದ್ದ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು. ನೀವುಗಳು ನಿಜಕ್ಕೂ ಉಗುರುಕಚ್ಚುವಷ್ಟು
ರೋಚಕ ರೀತಿಯಲ್ಲಿ ಪಂದ್ಯ ಗೆದ್ದಿರಿ. ನಿಮ್ಮ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳಿ ಬನ್ನಿ!”
ಧೋ: ಧನ್ಯವಾದ ರವಿ, ಪಂದ್ಯದ ಕೊನೆ ನಿಜಕ್ಕೂ ರೋಮಾಂಚಕವಾಗಿತ್ತು. ನಮ್ಮ ಹುಡುಗರು ಕೊನೆಯವರೆಗೂ
ಧೈರ್ಯಗುಂದಲಿಲ್ಲ. ಅದೇ ಕಾರಣದಿಂದ ನಾವು ಕಪ್ ಗೆದ್ದದ್ದು.
ರ: ನಿಮ್ಮ ಅಭಿಪ್ರಾಯದಲ್ಲಿ ನಿಮ್ಮ ಈ ವಿಜಯಕ್ಕೆ ಮುಖ್ಯ ಕಾರಣ ಯಾರು?
ಧೋ: ನಾವೆಲ್ಲರೂ ಚೆನ್ನಾಗಿಯೇ ಆಡಿದ್ದೆವು. ಆದರೆ ನನ್ನ ಅಭಿಪ್ರಾಯದಲ್ಲಿ ಪಂದ್ಯ ಗೆಲ್ಲಲು ಮುಖ್ಯ ಕಾರಣರಾದವರು
ಅಜಿತ್ ಅಗರ್ಕರ್.
ರ: (ಕಕ್ಕಾಬಿಕ್ಕಿಯಾಗಿ) ಅಜಿತ್ ಅಗರ್ಕರ್!!! ಅವರು ಫೈನಲ್ನಲ್ಲಿ ಆಡಲೇ ಇಲ್ಲವಲ್ಲ!!!!
ಧೋ: ಅದಕ್ಕೇ ಹೇಳಿದ್ದು. ಅಷ್ಟು ಕಡಿಮೆ ಸ್ಕೋರಿನ ಮ್ಯಾಚ್ನಲ್ಲಿ ಅವರೇನಾದರೂ ಆಡಿದ್ದರೆ, ಅವರ ನಾಲ್ಕು ಓವರ್ಗಳಲ್ಲಿ
ಖಂಡಿತ ಭರ್ಜರಿ ರನ್ ಮಾಡಿ ಪಾಕಿಸ್ತಾನ ಗೆಲ್ಲೋದು ಖಚಿತವಾಗುತ್ತಿತ್ತು.
ರ: (ಉಗುಳು ನುಂಗಿ) ಸರಿ.. ಸರಿ..ಈ ವಿಜಯಕ್ಕಾಗಿ ನೀವು ಮತ್ತೆ ಯಾರಿಗೆ ಧನ್ಯವಾದ ಕೊಡಲಿಚ್ಚಿಸುತ್ತೀರಿ?
ಧೋ: ನಮ್ಮೆಲ್ಲರ ಧನ್ಯವಾದಗಳು ಮೊದಲು ನಮ್ಮ ಟೀಮ್ ಡಾಕ್ಟರ್ರವರಿಗೇ ಸಲ್ಲಬೇಕು. ನಮ್ಮ ಫೈನಲ್ ಮುನ್ನ
ತಯಾರಿಗೆ ಅವರು ಸಲ್ಲಿಸಿದ ಸೇವೆ ಅಮೋಘ!
ರ: (ತಬ್ಬಿಬ್ಬಾಗಿ) ನನಗಿದ್ಯಾಕೋ ಅರ್ಥವಾಗಿಲ್ಲ. ಕನ್ಫ್ಯೂಸ್ ಆಗ್ತಿದೆ. ನಿಮ್ಮ ಡಾಕ್ಟರ್ ಅದೇನು ಸಹಾಯ ಮಾಡಿದರು?
ನಿಮ್ಮ ಕೋಚ್ ಅಥವಾ ಫಿಷಿಯೋ ಸಹಾಯ ಅಂದರೆ ಒಪ್ಪಿಕೋಬಹುದು… ಆದರೇ….
ಧೋ: (ಅಡ್ಡ ಬಾಯಿ ಹಾಕುತ್ತ) ಇದರಲ್ಲಿ ಕನ್ಫ್ಯೂಸ್ ಆಗೋ ಮಾತೇನಿದೆ? ಅವರು ಸೆಹ್ವಾಗ್ನನ್ನು ಫಿಟ್ನೆಸ್
ಟೆಸ್ಟ್ನಲ್ಲಿ ಫೇಲ್ ಮಾಡಿದ್ದೆ ನಮ್ಮ ಟೀಮ್ಗೆ ಕೊಟ್ಟ ಅಮೋಘ ಅನುದಾನ. ನಾವೆಲ್ಲರೂ ಮೈದಾನದಲ್ಲಿ ಮಾಡಿದ್ದಕ್ಕಿಂತಲೂ
ಹೆಚ್ಚಿನ ಶ್ರೇಯ ಅವರಿಗೇ ಹೋಗಬೇಕು. ಅವರು ನಮ್ಮ ಟೀಮ್ನ ಟ್ಯಾಕ್ಟಿಕ್ಸ್ನ ಮುಖ್ಯ ಭಾಗ.
ರ: (ತಲೆ ಕೊಡವುತ್ತ) ಹೂಂ! ಹೋಗಲಿ ಬಿಡಿ! ಈ ನಿಮ್ಮ ವಿಜಯದ ಸಂಕೇತವಾದ ಕಪ್ ಯಾರಿಗೆ ಡೆಡಿಕೇಟ್ ಮಾಡ್ತೀರಿ?
ಧೋ: ನಾನು ಮತ್ತು ನಮ್ಮ ತಂಡದ ಪ್ರತಿಯೊಬ್ಬ ಸದಸ್ಯನೂ ಕೂಡ ಒಮ್ಮತದಿಂದ ಈ ಕಪ್ ಅನ್ನು ಸಚಿನ್, ಗಂಗೂಲಿ
ಮತ್ತು ಡ್ರಾವಿಡ್ರವರಿಗೆ……..
ರ: (ಮಧ್ಯೆ ಬಾಯಿ ಹಾಕುತ್ತ) ನಿಜವಾಗಿಯೂ ನೀವುಗಳು ಬಹಳ ಪ್ರಶಂಸಾರ್ಹರು. ನಿಮಗೆಲ್ಲ ನಿಮ್ಮ ಹಿರಿಯರ ಬಗ್ಗೆ ಇಷ್ಟು
ಗೌರವ ಮತ್ತು ಅಭಿಮಾನವಿರುವುದು ಕಂಡು……..
ಧೋ: ಸ್ವಲ್ಪ ತಡೆಯಿರಿ ರವಿ! ನಾನು ಹೇಳುವುದನ್ನು ಪೂರ್ತಿ ಕೇಳಿಸಿಕೊಳ್ಳಿ! ಅವರೇನಾದರೂ ಈ ಪಂದ್ಯಾವಳಿಯಲ್ಲಿ
ಆಡಿದ್ದಿದ್ದರೆ ನಾವು ಮೊದಲನೇ ಸುತ್ತಿನಲ್ಲೇ ಮನೆಯ ಮುಖ ನೋಡುತ್ತಿದ್ದೆವು. ಅವರುಗಳು ತಾವಾಗಿಯೆ ಈ
ಪಂದ್ಯಾವಳಿಯಲ್ಲಿ ಆಡದಿರಲು ನಿರ್ಧಾರ ತೆಗೆದುಕೊಂಡದ್ದಕ್ಕೆ ನಾವೆಲ್ಲರೂ ಭಗವಂತನಿಗೆ ವಂದಿಸಬೇಕು. ಅವರ
ರಾಜಕೀಯವಿಲ್ಲದ ಕಾರಣ ನಮಗೆಲ್ಲರಿಗೂ ಕ್ರಿಕೆಟ್ ಉತ್ತಮವಾಗಿ ಆಡಿ ಕಪ್ ಗೆಲ್ಲಲು ಸಾಧ್ಯವಾಯಿತು.
ರ: ಹೋಗಲಿ ಬಿಡಿ. ಅಂತೂ ಪಂದ್ಯ ಕೊನೆಯ ಓವರ್ವರೆಗೂ ಬಹಳ ರೋಚಕವಾಗಿತ್ತು. ಕೊನೆಯಲ್ಲಿ ಪಾಕಿಸ್ತಾನದ
ಮಿಸ್ಬಾಹ್ ಮಾಡಿದ ಸಣ್ಣದೊಂದು ತಪ್ಪಿನಿಂದಾಗಿ ಕಪ್ ನಮ್ಮ ವಶವಾಯಿತು.
ಧೋ: ಸಣ್ಣದೊಂದು ತಪ್ಪು? ಇದೇನು ಹೀಗೆ ಹೇಳುತ್ತೀರಿ ರವಿ! ಆ ಶಾಟ್ ಹೊಡೆದ ಕೂದಲೆ ಆ ಮಿಸ್ಬಾಹ್ ನನಗೆ ಹೇಳಿದ
ಮಾತು -ನೋಡೋ ಧೋಣಿ. ನಾನು ಯಾರೂ ಇಲ್ಲದ ಕಡೆ ಯಲ್ಲಿ ಶಾಟ್ ಹೊಡೆದಿದ್ದೇನೆ ! ಅಂತ. ಪಾಪ ಆ
ಮುಂಡೇದರ ಮಹಾ ತಪ್ಪು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಮಲೆಯಾಳಿಗಳಿರುತ್ತಾರೆ ಅನ್ನುವುದನ್ನು ಮರೆತದ್ದು!
ಈ ಎಕ್ಸ್ಪ್ಲನೇಷನ್ ಕೇಳುತ್ತಿದ್ದಂತೆಯೇ ಸಂದರ್ಶಕ ರವಿ ಶಾಸ್ತ್ರಿ ಜ್ನಾನ ತಪ್ಪಿ ಕೆಳಗುರುಳಿದ. ಧೋಣಿ ಕಪ್ ಎತ್ತಿಕೊಂಡು ಮುನ್ನಡೆದ ಜಂಬದ ಕೋಳಿಯ ರೀತಿಯಲಿ.
*************
( ಈ ಸಂದರ್ಶನ ಬಹಳ ಹಿಂದೆ ಅಕ್ಟೋಬರ್ ೩ ನೇ ತಾರೀಕು "ಸಂಪದ " ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿತ್ತು.) http://sampada.net/article/5838
“ಕರ್”- ನಾಟಕದ ರಾಜಕೀಯ, ವಿಸರ್ಜನೆ, ಕರ್ನಾಟಕದ ರಕ್ಷಣೆ ಇತ್ಯಾದಿ ವಿಚಾರಗಳ ಬಗ್ಗೆ ಕಾಡುಹರಟೆ
- ನವರತ್ನ ಸುಧೀರ್
“ಪ್ರಸಕ್ತ ಪರಿಸ್ಠಿತಿಯಲ್ಲಿ ಕರ್ನಾಟಕದ ವಿಧಾನಸಭೆಯನ್ನು ವಿಸರ್ಜನೆ ಮಾಡುವದೇ ಸೂಕ್ತ ಎಂಬ ತಮ್ಮ ಅಭಿಮತವನ್ನು ರಾಜ್ಯಪಾಲರು ಕೇಂದ್ರಕ್ಕೆ ಕಳಿಸಿರುವ ಸಂದೇಶ ದಲ್ಲಿ ವ್ಯಕ್ತಪಡಿಸಿದ್ದಾರೆ”” ಅನ್ನುವ ಶೀರ್ಷಿಕೆ ಓದುತ್ತಿದ್ದಂತೆ ಅದು ಯಾಕೆ ವಿಸರ್ಜನೆ, ವಿಧಾನಸಭಾಭಂಗವೇಕಾಗಲಿಲ್ಲ? ಬಹುಷಃ ಭಂಗವಾಗಲು ಅದು ತಪಸ್ಸಲ್ಲ ಅಂತಿರಬಹುದೇ? ಹೀಗೇ ಏನೇನೋ ಪ್ರಶ್ನೆಗಳು ಮನಸ್ಸಿನಲ್ಲಿ. ಈ ವಿಚಾರ ಮಂಥನದ ಫಲ ಈ ಹರಟೆಯ ಬರಹ.
ಮೊದಲು For the sake of good order ಅನ್ನೋಹಾಗೆ ನನ್ನ ಈ (ತಲೆ) ಹರಟೆಯ ಲೇಖನಕ್ಕೆ ಅನ್ವಯಿಸುವ ಕೆಲವು definitions ಕೊಡುವುದು ಸೂಕ್ತ ಅಂತ ಅನಿಸಿಕೆ.
“ಕರ್” ನಾಟಕದಲ್ಲಿನ ಕರ್ ಹಿಂದಿಯ “ಮಾಡು” ಅಲ್ಲ. ಹಾಗೆಯೇ ಮರಾಠಿಯ ವೆಂಗ್ಸಾರ್- , ಗವಾ- ಮತ್ತು ಟೆಂಡುಲ್- ಗೆ ಸೇರಿಸುವ ಕರ್ ಕೂಡ ಅಲ್ಲ. ಅದು ಇಂಗ್ಲೀಷ್ ನ ಕೀಳಾರ್ಥದ Cur= ನಾಯಿಕುನ್ನಿ ಅಂತ. ಗೌರವಯುತವಾದ “ನಾಯಿಮರಿ” ಅನ್ನೋ ಸಂಬೋಧನೆ pet ಆದರೆ ಮಾತ್ರ ಅಂತ ನನ್ನ ನಂಬೋಣ.
ನಾಟಕ - ಹೆಚ್ಚು ಅರ್ಥೈಸುವ ಅಗತ್ಯವಿಲ್ಲ. ಇದನ್ನೂ ಆಡುವುದರಿಂದ ಒಂದು ಆಟವೂ ಹೌದು. ರಾಜಕಾರಣಿಗಳಿಗೆ ಎಲ್ಲವೂ ಆಟವೇ. ದೊಂಬರಾಟ ಮಾತ್ರ ನಾಟಕವಲ್ಲ.
ವರ್ಜ್ಯ - ಬಿಡಲು ಯೋಗ್ಯವಾದದ್ದು, ತ್ಯಾಜ್ಯ - something to be avoided, something which merits rejection ಅಂತ.
ತ್ಯಾಜ್ಯ - ವರ್ಜ್ಯ , ಬಿಡಲು ಯೋಗ್ಯವಾದದ್ದು -unaccepatable, undesirable, something to be eschewed ಅಂತ
ಅರೆ ವರ್ಜ್ಯ ಅಂದರೆ ತ್ಯಾಜ್ಯ, ತ್ಯಾಜ್ಯ ಅಂದರೆ ವರ್ಜ್ಯ. ಇದೇನ್ರೀ ಅಂತ ಕೇಳಬೇಡಿ. ನನಗೂ ಸ್ವಲ್ಪ ನಿಮ್ಮಂತೆಯೇ confusion.( ಕನ್ನಡಕಸ್ತೂರಿ.ಕಾಂ ನ ನಿಘಂಟು ಇದರ ಮೂಲ)
ಸದ್ಯಕ್ಕೆ ಅದು ಹಾಗೇ ಲೂಸ್ ಆಗಿ ಅರ್ಥ ಇರಲಿ.
ವಿಸರ್ಜನೆ - ಚೆದರಿಕೆ, ಸಭೆ- ಸಮಿತಿ ಮೊದಲಾದವುಗಳ ಮುಕ್ತಾಯ , cession, dissolution ಅಂತ ಒಂದು; - ಬಿಡುವುದು, ತ್ಯಜಿಸುವುದು - abandoning, getting rid of, giving up, quitting ಅಂತ ಇನ್ನೊಂದು.
ಒಟ್ಟಿನಲ್ಲಿ ವಿಸರ್ಜನೆ ಮಾಡೋದು ವರ್ಜ್ಯ ಮತ್ತು ತ್ಯಾಜ್ಯ ವಸ್ತುಗಳನ್ನು ಅಂತ ಭಾವಾರ್ಥ.
ಅದರೆ ಈ ಎರಡೂ ಅರ್ಥಗಳು ಪಾಪ ನಮ್ಮೆಲ್ಲರಿಗೂ ಬೇಕಾದ ಗಣಪತಿಯ ವಿಸರ್ಜನೆಗೆ ಅದು ಹೇಗೆ ಅನ್ವಯಿಸುತ್ತೋ ಆ ದೇವರೇ ಬಲ್ಲ. ಯಾಕೆಂದರೆ ಗಣಪತಿ ವರ್ಜ್ಯವೂ ಅಲ್ಲ, ತ್ಯಾಜ್ಯವೂ ಅಲ್ಲ.
ನಮ್ಮ ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ನೋಡಿದಾಗ, ಅದರಲ್ಲೂ ಮುಖ್ಯ ಭೂಮಿಕೆ ವಹಿಸಿದವರನ್ನು ಕುರಿತು ಇಂಗ್ಲೀಷ್ ಮೂಲದ “cur” ಪದದ ಉಪಯೋಗ ಅದೆಷ್ಟು ಸೂಕ್ತವೋ ನಿರ್ಣಯಿಸುವುದು ಕಷ್ಟ. ನಮ್ಮ ನಾಡಿನ ರಾಜಕಾರಣಿಗಳ ಬಗ್ಗೆ ವ್ಯಾಖ್ಯಾನಿಸುವಾಗ ಸಂದರ್ಭಾನುಸಾರ ಸರ್ವಭಕ್ಷಕ ಹಂದಿಗಳಿಗೋ, ಯಾವಾಗಲೂ ಕಚ್ಚಾಡುವ ನಾಯಿಗಳಿಗೋ, ಸತ್ತವರನ್ನೂ ಬಿಡದೆ ಕಿತ್ತಾಡುವ ರ(ಹ)ಣಹದ್ದುಗಳಿಗೋ, ಯಾರು ಏನೇ ಹೊಡಕೊಳ್ಳಲಿ ನಾವು ಮಾತ್ರ ದೇಶ “ಶೇವೇ” ಮಾಡುತ್ತೇವೆ ಅಂತ ನಿರಾತಂಕವಾಗಿ ಒಡಾಡಿಕೊಂಡಿರುವ ಕೋಣಗಳಿಗೋ ಹೋಲಿಸುವುದು ಸರ್ವೇ ಸಾಮಾನ್ಯ. ಬಿಹಾರದ ಲಾಲೂ ಪ್ರಸಾದರು ದನಕರುಗಳಿಗೇ ಮೀಸಲಾದ ಭೂಸಾ ಖರೀದಿಯಲ್ಲಿಯೇ ಕೋಟ್ಯಾಂತರ ರೂಪಾಯಿ ಭಕ್ಷಿಸಿ ಹಗರಣ ಮಾಡಿದ್ದು ಮರೆಯೋದಕ್ಕಾಗುತ್ಯೇ?
ಅದೊಂದು ಕಾಲವಿತ್ತು. ನರಸಿಂಹಸ್ವಾಮಿಯವರ ಕವಿತೆಯಲ್ಲಿನ ಮಲ್ಲಿಗೆ; ಕುವೆಂಪುರವರ ಸಹ್ಯಾದ್ರಿಯ ಶ್ರೀಗಂಧ, ಮಂಡ್ಯದ ಮೈಶುಗರ್ ನ ಕಬ್ಬಿನ ಸಕ್ಕರೆ ಇವೆಲ್ಲ ಮೈಸೂರಿನ ಹೆಸರೆತ್ತಿದಾಗಲೆಲ್ಲ ಸುವಾಸನೆ ಮತ್ತು ಸಿಹಿಯ ನೆನಪು ತರುವಂತಿತ್ತು.
ಆದರೆ ಈಗಿನ ರಾಜಕಾರಣದ ಕೆಸರಿನಲ್ಲಿ ,ಕೆಸರೇ ಕೋಣಗಳ ತಾಣವೂ ಅನ್ನೋದನ್ನ ಮರೆತು, ಅಲ್ಲಿಯೇ ಕಮಲವನ್ನರಳಿಸಹೋಗಿ, ಚಡ್ಡಿ ಕಳೆದುಕೊಂಡ ಯಡ್ಡಿಯೂರಪ್ಪನವರ ದುಸ್ಸಾಹಸದ ದುರಂತ ಮತ್ತು ಅದರಿಂದ ಹರಡಿದ ದುರ್ಗಂಧದ ಮೈಸೂರು “ಸ್ಮೆಲ್ಲಿ”ಗೆ ಎಲ್ಲರೂ ಮೂಗು ಹಿಡಿಯುವಂತಾಗಿದೆ. (ತಿರುಚಿದ ಮೈಸೂರು ಸ್ಮೆಲ್ಲಿಗೆ ಕವನಗಳು ಬೇರೆಡೆ ಅಂತರ್ಜಾಲದ “ಸಂಪದ”ದಲ್ಲಿಯೇ ಪ್ರಕಟಿತ.)
ದುರ್ಗಂಧಕ್ಕೂ ವಿಸರ್ಜನೆಗೂ ಅದೆಂಥ ನಂಟು? ವರ್ಜ್ಯವಾದದ್ದನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ತ್ಯಾಜ್ಯವಾಗಿ ದೇಹದಿಂದ ವಿಸರ್ಜನೆಯಾದಾಗ ದುರ್ಗಂಧ ಜೊತೆಯಲ್ಲಿರುವುದು ಗೊತ್ತೇ ಇದೆ. ವಿಧಾನಸಭೆಯೂ ತ್ಯಾಜ್ಯವಾದಾಗ ವಿಸರ್ಜಿಸಲರ್ಹ ಅಂತ ರಾಜ್ಯಪಾಲರ ಅಭಿಪ್ರಾಯ. ಅಂತೂ ಎರಡೂ ಹೇಸಿಗೆ ಕೆಲಸಗಳೇ!
ಹಾಗೆಯೇ ವಿಸರ್ಜನೆಗೂ ನೀರಿಗೂ ನಂಟಿದೆಯಲ್ಲವೇ. ಮತ್ತೆ ಮೊದಲಿಗೆ ನಮ್ಮಲ್ಲಿ ಗಣಪತಿ ಮತ್ತು ಬಂಗಾಳದಲ್ಲಿನ ದುರ್ಗಾ ವಿಸರ್ಜನೆ ಜ್ನಾಪಕಕ್ಕೆ ಬರುತ್ತಲ್ಲವೇ. ದೈಹಿಕ ವಿಸರ್ಜನೆಗಳಾದಾಗ ನೀರಿನಿಂದ ಫ್ಲಷ್ ಮಾಡಿ ಒಳಚರಂಡಿಗೆ ಕಳುಹಿಸುವ ವ್ಯವಸ್ಥೆ ಇರುವುದು ಎಲ್ಲರಿಗೂ ಗೊತ್ತು. ಇದರಿಂದ ಆ ವಿಸರ್ಜಿತ ತ್ಯಾಜ್ಯ ಅದೇ ರೂಪದಲ್ಲಿ recycle ಆಗುವ ಸಂಭಾವನೆ ಇಲ್ಲವೇ ಇಲ್ಲ ಅನ್ನಲಾಗದಿದ್ದರೂ ಅಪರೂಪ. ಇದೇ ವ್ಯವಸ್ಥೆಯನ್ನು ವಿಧಾನಸಭೆಯ ವಿಸರ್ಜನೆಗೂ ಅಳವಡಿಸಿ ಈಗಿನ ರಾಜಕಾರಣಿಗಳನ್ನು ಪರ್ಮನೆಂಟ್ ಆಗಿ ಒಳಚರಂಡಿಗೆ ಕಳಿಸುವ ಹಾಗಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಅನ್ನಿಸೋಲ್ಲವೇ! ಇಲ್ಲೂ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಈಚೀಚೆಗೆ ಸಮಾಜದ ಒಳಚರಂಡಿಗಳಲ್ಲೇ ಓಡಾಡುತ್ತ , drain inspector ಗಳಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರೊಬ್ಬರು ಕುಟುಂಬದವರೆಲ್ಲರೂ ಕೂತು ನೋಡುವಂಥ “ಉತ್ತಮ ಅಭಿರುಚಿಯ” ಸಿನಿಮಾ ಮಾಡುತ್ತೇನೆ ಎಂದು ಹೆದರಿಸಿ ಆ ನಿಟ್ಟಿನಲ್ಲಿ ಒಳಚರಂಡಿಯಲ್ಲಿರುವುದನ್ನು ಬಯಲಿಗೆಳೆದು ತಮ್ಮ ವೈಯುಕ್ತಿಕ ತೆವಲು ತೀರಿಸಿಕೊಂಡರೆ ಗಬ್ಬು ನಾತ ಇನ್ನೂ ಎಲ್ಲೆಡೆ ಹರಡುವುದು ಮಾತ್ರ ಖಂಡಿತ.
ಮರುಚುನಾವಣೆ. ಮತ್ತದೇ ಖೊಟಾ ನಾಣ್ಯಗಳ ಮರುಚಲಾವಣೆ. ಅದೇ ಬೀಜಾಸುರರ ಹಾಗೂ ಮಹಿಷಾಸುರರ ಜನನ. ನಮ್ಮ ಕನ್ನಡಿಗರ ಬುಧ್ಧಿಮತ್ತೆ ಮತ್ತು ಜಾಣತನ ನೋಡಿದರೆ ಮತ್ತೊಮ್ಮೆ ಈ ಭ್ರಷ್ಟ ರಾಜಕಾರಣಿಗಳೇ ಇನ್ನೂ ಹೆಚ್ಚಿನ ಬಹುಮತದಿಂದ ಚುನಾಯಿತರಾಗಿ ಬರುವ ಸಂಭಾವನೆಯನ್ನು ಖಂಡಿತ ತಳ್ಳಿಹಾಕುವಂತಿಲ್ಲ. ಈಗಿನ ರಾಜಕಾರಣಿಗಳು ಸ್ವಲ್ಪವೂ ಸಂವೇದನೆಯಿಲ್ಲದವರು. ಇವರುಗಳ ನಿಘಂಟಿನಲ್ಲಿ ಮಾನ,ಮರ್ಯಾದೆ, ನೀತಿ, ನ್ಯಾಯ, ಸ್ವಾಭಿಮಾನ, ದೇಶಪ್ರೇಮ, ದೇಶಭಕ್ತಿ, ಇತ್ಯಾದಿಗಳು ಕಾಣುವುದೇ ಇಲ್ಲವಂತೆ. ಹಾದರ ಮಾಡಿ ಬಂದ ಕೆಲವೇ ತಾಸುಗಳಲ್ಲಿ ಸ್ವಲ್ಪವೂ ನಾಚಿಕೆಯಿಲ್ಲದೆ TV9 ಸ್ಟೂಡಿಯೋನಲ್ಲಿ ಕುಳಿತು ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವ ಉಧ್ಧಟತನ ಕಂಡಿಲ್ಲವೇ? ಯಾರೇ ಎಷ್ಟೇ ಉಗಿಯಲಿ, ತೆಗಳಲಿ, ಅದ್ಯಾವುದೂ ಅವರಿಗೆ ತಟ್ಟುವುದಿಲ್ಲ. ಕೋಣದ ಮೈ ಮೇಲಿನ ನೀರಿನಂತೆ. ಒದರಿಕೊಂಡು ಮುಂದೆ ಹೋಗುವುದು.
ಒಂದು ಹಳೆಯ ಇಂಗ್ಲೀಷ್ ಜೋಕ್ ಜ್ನಾಪಕಕ್ಕೆ ಬಂತು. ಒಮ್ಮೆ ಒಬ್ಬ ಪೇದೆ ಬಂದು ಹಿರಿಯ ಅಧಿಕಾರಿಗಳಿಗೆ ಹೇಳಿದನಂತೆ’ Sir, there was a Sindhi gentleman who had come to see you” ಅಂತ. ಆಗ ಅವರು “It can’t be! Either he is a Sindhi or a Gentleman and can’t be both” ಅಂತ ಉದ್ಗರಿಸಿದ್ದರಂತೆ. ಹಾಗೇ ರಾಜಕಾರಣಿ ಅಂದಮೇಲೆ ಜೊತೆಗೆ ಪ್ರಾಮಾಣಿಕ ಅಂತ ಸೇರಿಸಹೋದರೆ ನಗೆಪಾಟಲಿಗೀಡಾಗುತ್ತೇವೆ. ಪ್ರಾಮಾಣಿಕ ರಾಜಕಾರಣಿ ಚತುರ್ಭುಜೆ ಲಕ್ಷ್ಮಿಯಷ್ಟೇ ಅಪರೂಪ, ಅಲಭ್ಯ. ಭ್ರಷ್ಟತೆಯೇ ಅವರ ಹುಟ್ಟುಗುಣ ಅನ್ನೋದು ಜನಜನಿತ.
ರಾಜಕಾರಣ ಇವರಿಗೆಲ್ಲ ಒಂದು ರೀತಿಯ ಆಟವಂತೆ. ಅದಕ್ಕೇ ಇರಬಹುದು “The games politicians play” ಅನ್ನೋ ಪ್ರಚಲಿತ ಹೇಳಿಕೆ. ಇಲ್ಲಿ “ ಏನಾದರೂ ಆಗಬಹುದು” ; “politics is art of the possible”; ‘ there are no permanent friends and foes in politics” ಎಂದೆಲ್ಲ ತಮ್ಮನ್ನು ಸಮರ್ಥಿಸಿಕೋತಾರೆ ಈ ಮಾನಗೆಟ್ಟವರು.
ಒಂದು sport ಅಂದ ಮೇಲೆ ಪ್ರಶಸ್ತಿಗಳು ಬೇಡವೇ. ಇನ್ನು ಸ್ವಲ್ಪೇ ದಿನಗಳಲ್ಲಿ ರಾಜಕೀಯ ದಾಳದಾಟದ ಕೋಚ್ಗಳಿಗೆ ಸಲ್ಲುವ ಪ್ರಥಮ “ದ್ರೋಹಾಚಾರ್ಯ ಪ್ರಶಸ್ತಿ” ನಮ್ಮ ದೇವೇಗೌಡರಿಗೇ ಸಿಗುವುದು ಖಚಿತ ಅಂತ ಸುದ್ದಿ. ಹಾಗೆಯೇ ಗೌಡರಮುಂದೆ “ಮಂಡಿಯೂರಪ್ಪ” ನಾಗಲು ಇಚ್ಛಿಸದೆ ಯಡ್ಡಿಯೂರಪ್ಪ ಅಂತ ಹೆಸರು ಬದಲಿಸಿಕೊಂಡ ಯಡಿಯೂರಪ್ಪನವರಿಗೆ ಚಕ್ರವ್ಯೂಹವನ್ನು ಭೇದಿಸಲಾಗದ “ಅಭಿಮನ್ಯು ಪ್ರಶಸ್ತಿ” ಕೂಡ ಖಂಡಿತ. ಇತ್ತ ಅಪ್ಪನೂ ಬೇಕು, ಅತ್ತ ಶಾಸಕರೂ ಬೇಕು, ಅಧಿಕಾರವೂ ಬೇಕು ಎಂದು ತೀರ್ಮಾನಿಸಲಾಗದೆ ನರ್ತಿಸುತ್ತಿದ್ದ ಕುಮಾರಸ್ವಾಮಿಗೆ “ಅರ್ಜುನ ಪ್ರಶಸ್ತಿ” ಬದಲಾಗಿ ಇವನೂ ಅಲ್ಲದ ಅವಳೂ ಅಲ್ಲದ “ಬೃಹನ್ನಳಾ ಪ್ರಶಸ್ತಿ” ಕೊಡುತ್ತಾರಂತೆ. ಶಾಸಕರನ್ನು ಕೆಡವಲು ದೇವೇಗೌಡರಿಂದ ಮುಂದೆ ಮಾಡಲ್ಪಟ್ಟ ಪ್ರಕಾಶ್ರವರಿಗೆ “ಶಿಖಂಡಿ ಪ್ರಶಸ್ತಿ” ಯೂ ತೀರ್ಮಾನವಾಗಿದೆಯಂತೆ.
ಹೊಯ್ಸಳರ ಕಾಲದಿಂದಲೂ ಸಾಹಿತ್ಯ, ಕಲೆ, ಶಿಲ್ಪಗಳಿಗೆ ಪ್ರಖ್ಯಾತವಾದ ಹಾಸನದ ಹೆಸರನ್ನು ಕೆಸರಾಗಿಸಿದ, ಅಲ್ಲಿಯೇ ಉದ್ಭವವಾದ ಹರದನಹಳ್ಳಿಯ ಮಹಿಷತ್ರಯರ ನಿರ್ಮೂಲನ ಹೇಗೆ? ಆ ಚಾಮುಂಡೇಶ್ವರಿಯೇ ಮತ್ತೊಮ್ಮೆ ಅವತರಿಸಬೇಕಾದೀತೇನೋ! ಈ ಐಡಿಯಾ ಕೇಳಿಸಿಕೊಂಡ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳು ಸೋನಿಯಾರವರಿಗೆ ಚಾಮುಂಡಿಯ ಮೇಕಪ್ ಮಾಡಿ ಅವರ ಕಾಲ ಕೆಳಗಿನ ಮಹಿಷನ ತಲೆಯ ಜಾಗದಲ್ಲಿ ಹಿರಿಯ ಗೌಡರ ತಲೆ ಅಂಟಿಸಿ ಪೋಸ್ಟರ್ ಕೂಡ ಛಪಾಯಿಸಿ ಅಷ್ಟರಲ್ಲೇ ತಮ್ಮ ಸ್ವಾಮಿ(ನಿ)ಭಕ್ತಿ ಪ್ರಸರಿಸುವ ಸಾಧ್ಯತೆಗಳುಂಟು. ರಾಜಾಸ್ಥಾನದಲ್ಲಿ ವಸುಂಧರಾ ರಾಜೆಯವರಿಗೆ ಅನ್ನಪೂರ್ಣೆಯ ವೇಶ ಹಾಕಿಸಿದ ಭಾಜಪ ಮತ್ತು ಇಂತಹದೇ ಕೆಲಸಕ್ಕೆ ಕೈ ಹಾಕಿ ಸೋನಿಯಾಗೆ ದುರ್ಗಾ ವೇಶ ಹಾಕಿಸಿದ ಉತ್ತರಪ್ರದೇಶದ ಕಾಂಗೈ ಪ್ರಯತ್ನದ ನೆನಪುಗಳಿನ್ನೂ ಹಸಿರಾಗಿದೆಯಲ್ಲವೇ?
ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ತನ್ನ ಪ್ರತಿನಿಧಿಯನ್ನು ಚುನಾಯಿಸುವ ಹಕ್ಕಿರುವ ಜನಸಾಮಾನ್ಯನಿಗೆ, ಆಯ್ಕೆಯಾದ ಮೇಲೆ ಅವನ ಮೇಲೆ ಯಾವ ರೀತಿಯ ಹತೋಟಿಯೂ ಇಲ್ಲದಿರುವುದು ಅದೆಂಥ ವಿಪರ್ಯಾಸ? ಚುನಾಯಿತನಾದ ಕೂಡಲೆ ತನ್ನ ನಿಜವಾದ ಬಣ್ಣ ತೋರಿಸುತ್ತ, ಕುರ್ಚಿಗೆ ಅಂಟಿಕೊಂಡು ಪೂರ್ಣ ಅವಧಿಯಲ್ಲಿ ತನ್ನನ್ನು ಆರಿಸಿದವರನ್ನು ಉಪೇಕ್ಷಿಸುವ ರಾಜಕಾರಣಿಯ ಧೈರ್ಯ ಅದೆಷ್ಟು? ನಿಜವಾಗಿಯೂ ಯಾರು ಬಲಿಷ್ಠರು? ಅವರನ್ನು ಚುನಾಯಿಸುವ ನಾವೋ? ರಾಜಕಾರಣಿಗಳೋ? ಬಾಟೆಲಿನಲ್ಲಿದ್ದ ಭೂತವನ್ನು ಹೊರಗೆ ಬಿಟ್ಟು ಮತ್ತೆ ಒಳಗೆ ತೂರಿಸಲಾಗದಂತಹ ಅಸಹಾಯಕರು ನಾವು. ಮೇರಿ ಶೆಲ್ಲಿ ತನ್ನ ಹತ್ತೊಂಬತ್ತರ ವಯಸ್ಸಿನಲ್ಲಿ ಬರೆದ Frankenstein ಕಾದಂಬರಿಯಲ್ಲಿ ವರ್ಣಿಸಿದ ಸೃಷ್ಟಿಕರ್ತನಿಗೇ ಮುಳುವಾದ ರಾಕ್ಷಸನ ನೆನಪಾಗುತ್ತೆ ಈ ರಾಜಕಾರಣಿಗಳನ್ನು ನೋಡಿದಾಗಲೆಲ್ಲ.
ಪರಭಾಷಿಗರ ದಾಳಿಯಿಂದ ಕನ್ನಡವನ್ನು ರಕ್ಷಿಸುವ ಪಣ ತೊಟ್ಟಿರುವ ಕರ್ನಾಟಕ ರಕ್ಷಣಾ ವೇದಿಕೆ ಏಕೆ ತಮ್ಮ ನಿಗದಿತ ಕಾರ್ಯಕ್ರಮದಿಂದ ಸ್ವಲ್ಪ ಹೊರಬಂದು ಕರ್ನಾಟಕವನ್ನು ನಮ್ಮ ಭ್ರಷ್ಟ ರಾಜಕಾರಣಿಗಳಿಂದಲೇ ರಕ್ಷಿಸುವ ಕಾರ್ಯ ಹಮ್ಮಿಕೊಂಡರೆ ಚೆನಾಗಿರುತ್ತಲ್ಲವೇ? ವೇದಿಕೆ ಪಕ್ಷಾತೀತ ಅಂತ ನಮ್ಮ ನಂಬಿಕೆ ತಪ್ಪಲ್ಲ ತಾನೆ? ಮಣ್ಣಿನ ಮಕ್ಕಳನ್ನು ಮತ್ತೆ ಮಣ್ಣಿಗೆ ಮರಳಿಸುವಂಥ ಪವಿತ್ರವಾದ ಕೆಲಸ ಮಾಡಿದರೆ ನಾವೆಲ್ಲ ಅವರಿಗೆ ಚಿರಋಣಿಗಳಾಗಬಹುದಲ್ಲ!
“ಪ್ರಸಕ್ತ ಪರಿಸ್ಠಿತಿಯಲ್ಲಿ ಕರ್ನಾಟಕದ ವಿಧಾನಸಭೆಯನ್ನು ವಿಸರ್ಜನೆ ಮಾಡುವದೇ ಸೂಕ್ತ ಎಂಬ ತಮ್ಮ ಅಭಿಮತವನ್ನು ರಾಜ್ಯಪಾಲರು ಕೇಂದ್ರಕ್ಕೆ ಕಳಿಸಿರುವ ಸಂದೇಶ ದಲ್ಲಿ ವ್ಯಕ್ತಪಡಿಸಿದ್ದಾರೆ”” ಅನ್ನುವ ಶೀರ್ಷಿಕೆ ಓದುತ್ತಿದ್ದಂತೆ ಅದು ಯಾಕೆ ವಿಸರ್ಜನೆ, ವಿಧಾನಸಭಾಭಂಗವೇಕಾಗಲಿಲ್ಲ? ಬಹುಷಃ ಭಂಗವಾಗಲು ಅದು ತಪಸ್ಸಲ್ಲ ಅಂತಿರಬಹುದೇ? ಹೀಗೇ ಏನೇನೋ ಪ್ರಶ್ನೆಗಳು ಮನಸ್ಸಿನಲ್ಲಿ. ಈ ವಿಚಾರ ಮಂಥನದ ಫಲ ಈ ಹರಟೆಯ ಬರಹ.
ಮೊದಲು For the sake of good order ಅನ್ನೋಹಾಗೆ ನನ್ನ ಈ (ತಲೆ) ಹರಟೆಯ ಲೇಖನಕ್ಕೆ ಅನ್ವಯಿಸುವ ಕೆಲವು definitions ಕೊಡುವುದು ಸೂಕ್ತ ಅಂತ ಅನಿಸಿಕೆ.
“ಕರ್” ನಾಟಕದಲ್ಲಿನ ಕರ್ ಹಿಂದಿಯ “ಮಾಡು” ಅಲ್ಲ. ಹಾಗೆಯೇ ಮರಾಠಿಯ ವೆಂಗ್ಸಾರ್- , ಗವಾ- ಮತ್ತು ಟೆಂಡುಲ್- ಗೆ ಸೇರಿಸುವ ಕರ್ ಕೂಡ ಅಲ್ಲ. ಅದು ಇಂಗ್ಲೀಷ್ ನ ಕೀಳಾರ್ಥದ Cur= ನಾಯಿಕುನ್ನಿ ಅಂತ. ಗೌರವಯುತವಾದ “ನಾಯಿಮರಿ” ಅನ್ನೋ ಸಂಬೋಧನೆ pet ಆದರೆ ಮಾತ್ರ ಅಂತ ನನ್ನ ನಂಬೋಣ.
ನಾಟಕ - ಹೆಚ್ಚು ಅರ್ಥೈಸುವ ಅಗತ್ಯವಿಲ್ಲ. ಇದನ್ನೂ ಆಡುವುದರಿಂದ ಒಂದು ಆಟವೂ ಹೌದು. ರಾಜಕಾರಣಿಗಳಿಗೆ ಎಲ್ಲವೂ ಆಟವೇ. ದೊಂಬರಾಟ ಮಾತ್ರ ನಾಟಕವಲ್ಲ.
ವರ್ಜ್ಯ - ಬಿಡಲು ಯೋಗ್ಯವಾದದ್ದು, ತ್ಯಾಜ್ಯ - something to be avoided, something which merits rejection ಅಂತ.
ತ್ಯಾಜ್ಯ - ವರ್ಜ್ಯ , ಬಿಡಲು ಯೋಗ್ಯವಾದದ್ದು -unaccepatable, undesirable, something to be eschewed ಅಂತ
ಅರೆ ವರ್ಜ್ಯ ಅಂದರೆ ತ್ಯಾಜ್ಯ, ತ್ಯಾಜ್ಯ ಅಂದರೆ ವರ್ಜ್ಯ. ಇದೇನ್ರೀ ಅಂತ ಕೇಳಬೇಡಿ. ನನಗೂ ಸ್ವಲ್ಪ ನಿಮ್ಮಂತೆಯೇ confusion.( ಕನ್ನಡಕಸ್ತೂರಿ.ಕಾಂ ನ ನಿಘಂಟು ಇದರ ಮೂಲ)
ಸದ್ಯಕ್ಕೆ ಅದು ಹಾಗೇ ಲೂಸ್ ಆಗಿ ಅರ್ಥ ಇರಲಿ.
ವಿಸರ್ಜನೆ - ಚೆದರಿಕೆ, ಸಭೆ- ಸಮಿತಿ ಮೊದಲಾದವುಗಳ ಮುಕ್ತಾಯ , cession, dissolution ಅಂತ ಒಂದು; - ಬಿಡುವುದು, ತ್ಯಜಿಸುವುದು - abandoning, getting rid of, giving up, quitting ಅಂತ ಇನ್ನೊಂದು.
ಒಟ್ಟಿನಲ್ಲಿ ವಿಸರ್ಜನೆ ಮಾಡೋದು ವರ್ಜ್ಯ ಮತ್ತು ತ್ಯಾಜ್ಯ ವಸ್ತುಗಳನ್ನು ಅಂತ ಭಾವಾರ್ಥ.
ಅದರೆ ಈ ಎರಡೂ ಅರ್ಥಗಳು ಪಾಪ ನಮ್ಮೆಲ್ಲರಿಗೂ ಬೇಕಾದ ಗಣಪತಿಯ ವಿಸರ್ಜನೆಗೆ ಅದು ಹೇಗೆ ಅನ್ವಯಿಸುತ್ತೋ ಆ ದೇವರೇ ಬಲ್ಲ. ಯಾಕೆಂದರೆ ಗಣಪತಿ ವರ್ಜ್ಯವೂ ಅಲ್ಲ, ತ್ಯಾಜ್ಯವೂ ಅಲ್ಲ.
ನಮ್ಮ ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ನೋಡಿದಾಗ, ಅದರಲ್ಲೂ ಮುಖ್ಯ ಭೂಮಿಕೆ ವಹಿಸಿದವರನ್ನು ಕುರಿತು ಇಂಗ್ಲೀಷ್ ಮೂಲದ “cur” ಪದದ ಉಪಯೋಗ ಅದೆಷ್ಟು ಸೂಕ್ತವೋ ನಿರ್ಣಯಿಸುವುದು ಕಷ್ಟ. ನಮ್ಮ ನಾಡಿನ ರಾಜಕಾರಣಿಗಳ ಬಗ್ಗೆ ವ್ಯಾಖ್ಯಾನಿಸುವಾಗ ಸಂದರ್ಭಾನುಸಾರ ಸರ್ವಭಕ್ಷಕ ಹಂದಿಗಳಿಗೋ, ಯಾವಾಗಲೂ ಕಚ್ಚಾಡುವ ನಾಯಿಗಳಿಗೋ, ಸತ್ತವರನ್ನೂ ಬಿಡದೆ ಕಿತ್ತಾಡುವ ರ(ಹ)ಣಹದ್ದುಗಳಿಗೋ, ಯಾರು ಏನೇ ಹೊಡಕೊಳ್ಳಲಿ ನಾವು ಮಾತ್ರ ದೇಶ “ಶೇವೇ” ಮಾಡುತ್ತೇವೆ ಅಂತ ನಿರಾತಂಕವಾಗಿ ಒಡಾಡಿಕೊಂಡಿರುವ ಕೋಣಗಳಿಗೋ ಹೋಲಿಸುವುದು ಸರ್ವೇ ಸಾಮಾನ್ಯ. ಬಿಹಾರದ ಲಾಲೂ ಪ್ರಸಾದರು ದನಕರುಗಳಿಗೇ ಮೀಸಲಾದ ಭೂಸಾ ಖರೀದಿಯಲ್ಲಿಯೇ ಕೋಟ್ಯಾಂತರ ರೂಪಾಯಿ ಭಕ್ಷಿಸಿ ಹಗರಣ ಮಾಡಿದ್ದು ಮರೆಯೋದಕ್ಕಾಗುತ್ಯೇ?
ಅದೊಂದು ಕಾಲವಿತ್ತು. ನರಸಿಂಹಸ್ವಾಮಿಯವರ ಕವಿತೆಯಲ್ಲಿನ ಮಲ್ಲಿಗೆ; ಕುವೆಂಪುರವರ ಸಹ್ಯಾದ್ರಿಯ ಶ್ರೀಗಂಧ, ಮಂಡ್ಯದ ಮೈಶುಗರ್ ನ ಕಬ್ಬಿನ ಸಕ್ಕರೆ ಇವೆಲ್ಲ ಮೈಸೂರಿನ ಹೆಸರೆತ್ತಿದಾಗಲೆಲ್ಲ ಸುವಾಸನೆ ಮತ್ತು ಸಿಹಿಯ ನೆನಪು ತರುವಂತಿತ್ತು.
ಆದರೆ ಈಗಿನ ರಾಜಕಾರಣದ ಕೆಸರಿನಲ್ಲಿ ,ಕೆಸರೇ ಕೋಣಗಳ ತಾಣವೂ ಅನ್ನೋದನ್ನ ಮರೆತು, ಅಲ್ಲಿಯೇ ಕಮಲವನ್ನರಳಿಸಹೋಗಿ, ಚಡ್ಡಿ ಕಳೆದುಕೊಂಡ ಯಡ್ಡಿಯೂರಪ್ಪನವರ ದುಸ್ಸಾಹಸದ ದುರಂತ ಮತ್ತು ಅದರಿಂದ ಹರಡಿದ ದುರ್ಗಂಧದ ಮೈಸೂರು “ಸ್ಮೆಲ್ಲಿ”ಗೆ ಎಲ್ಲರೂ ಮೂಗು ಹಿಡಿಯುವಂತಾಗಿದೆ. (ತಿರುಚಿದ ಮೈಸೂರು ಸ್ಮೆಲ್ಲಿಗೆ ಕವನಗಳು ಬೇರೆಡೆ ಅಂತರ್ಜಾಲದ “ಸಂಪದ”ದಲ್ಲಿಯೇ ಪ್ರಕಟಿತ.)
ದುರ್ಗಂಧಕ್ಕೂ ವಿಸರ್ಜನೆಗೂ ಅದೆಂಥ ನಂಟು? ವರ್ಜ್ಯವಾದದ್ದನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ತ್ಯಾಜ್ಯವಾಗಿ ದೇಹದಿಂದ ವಿಸರ್ಜನೆಯಾದಾಗ ದುರ್ಗಂಧ ಜೊತೆಯಲ್ಲಿರುವುದು ಗೊತ್ತೇ ಇದೆ. ವಿಧಾನಸಭೆಯೂ ತ್ಯಾಜ್ಯವಾದಾಗ ವಿಸರ್ಜಿಸಲರ್ಹ ಅಂತ ರಾಜ್ಯಪಾಲರ ಅಭಿಪ್ರಾಯ. ಅಂತೂ ಎರಡೂ ಹೇಸಿಗೆ ಕೆಲಸಗಳೇ!
ಹಾಗೆಯೇ ವಿಸರ್ಜನೆಗೂ ನೀರಿಗೂ ನಂಟಿದೆಯಲ್ಲವೇ. ಮತ್ತೆ ಮೊದಲಿಗೆ ನಮ್ಮಲ್ಲಿ ಗಣಪತಿ ಮತ್ತು ಬಂಗಾಳದಲ್ಲಿನ ದುರ್ಗಾ ವಿಸರ್ಜನೆ ಜ್ನಾಪಕಕ್ಕೆ ಬರುತ್ತಲ್ಲವೇ. ದೈಹಿಕ ವಿಸರ್ಜನೆಗಳಾದಾಗ ನೀರಿನಿಂದ ಫ್ಲಷ್ ಮಾಡಿ ಒಳಚರಂಡಿಗೆ ಕಳುಹಿಸುವ ವ್ಯವಸ್ಥೆ ಇರುವುದು ಎಲ್ಲರಿಗೂ ಗೊತ್ತು. ಇದರಿಂದ ಆ ವಿಸರ್ಜಿತ ತ್ಯಾಜ್ಯ ಅದೇ ರೂಪದಲ್ಲಿ recycle ಆಗುವ ಸಂಭಾವನೆ ಇಲ್ಲವೇ ಇಲ್ಲ ಅನ್ನಲಾಗದಿದ್ದರೂ ಅಪರೂಪ. ಇದೇ ವ್ಯವಸ್ಥೆಯನ್ನು ವಿಧಾನಸಭೆಯ ವಿಸರ್ಜನೆಗೂ ಅಳವಡಿಸಿ ಈಗಿನ ರಾಜಕಾರಣಿಗಳನ್ನು ಪರ್ಮನೆಂಟ್ ಆಗಿ ಒಳಚರಂಡಿಗೆ ಕಳಿಸುವ ಹಾಗಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಅನ್ನಿಸೋಲ್ಲವೇ! ಇಲ್ಲೂ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಈಚೀಚೆಗೆ ಸಮಾಜದ ಒಳಚರಂಡಿಗಳಲ್ಲೇ ಓಡಾಡುತ್ತ , drain inspector ಗಳಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರೊಬ್ಬರು ಕುಟುಂಬದವರೆಲ್ಲರೂ ಕೂತು ನೋಡುವಂಥ “ಉತ್ತಮ ಅಭಿರುಚಿಯ” ಸಿನಿಮಾ ಮಾಡುತ್ತೇನೆ ಎಂದು ಹೆದರಿಸಿ ಆ ನಿಟ್ಟಿನಲ್ಲಿ ಒಳಚರಂಡಿಯಲ್ಲಿರುವುದನ್ನು ಬಯಲಿಗೆಳೆದು ತಮ್ಮ ವೈಯುಕ್ತಿಕ ತೆವಲು ತೀರಿಸಿಕೊಂಡರೆ ಗಬ್ಬು ನಾತ ಇನ್ನೂ ಎಲ್ಲೆಡೆ ಹರಡುವುದು ಮಾತ್ರ ಖಂಡಿತ.
ಮರುಚುನಾವಣೆ. ಮತ್ತದೇ ಖೊಟಾ ನಾಣ್ಯಗಳ ಮರುಚಲಾವಣೆ. ಅದೇ ಬೀಜಾಸುರರ ಹಾಗೂ ಮಹಿಷಾಸುರರ ಜನನ. ನಮ್ಮ ಕನ್ನಡಿಗರ ಬುಧ್ಧಿಮತ್ತೆ ಮತ್ತು ಜಾಣತನ ನೋಡಿದರೆ ಮತ್ತೊಮ್ಮೆ ಈ ಭ್ರಷ್ಟ ರಾಜಕಾರಣಿಗಳೇ ಇನ್ನೂ ಹೆಚ್ಚಿನ ಬಹುಮತದಿಂದ ಚುನಾಯಿತರಾಗಿ ಬರುವ ಸಂಭಾವನೆಯನ್ನು ಖಂಡಿತ ತಳ್ಳಿಹಾಕುವಂತಿಲ್ಲ. ಈಗಿನ ರಾಜಕಾರಣಿಗಳು ಸ್ವಲ್ಪವೂ ಸಂವೇದನೆಯಿಲ್ಲದವರು. ಇವರುಗಳ ನಿಘಂಟಿನಲ್ಲಿ ಮಾನ,ಮರ್ಯಾದೆ, ನೀತಿ, ನ್ಯಾಯ, ಸ್ವಾಭಿಮಾನ, ದೇಶಪ್ರೇಮ, ದೇಶಭಕ್ತಿ, ಇತ್ಯಾದಿಗಳು ಕಾಣುವುದೇ ಇಲ್ಲವಂತೆ. ಹಾದರ ಮಾಡಿ ಬಂದ ಕೆಲವೇ ತಾಸುಗಳಲ್ಲಿ ಸ್ವಲ್ಪವೂ ನಾಚಿಕೆಯಿಲ್ಲದೆ TV9 ಸ್ಟೂಡಿಯೋನಲ್ಲಿ ಕುಳಿತು ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವ ಉಧ್ಧಟತನ ಕಂಡಿಲ್ಲವೇ? ಯಾರೇ ಎಷ್ಟೇ ಉಗಿಯಲಿ, ತೆಗಳಲಿ, ಅದ್ಯಾವುದೂ ಅವರಿಗೆ ತಟ್ಟುವುದಿಲ್ಲ. ಕೋಣದ ಮೈ ಮೇಲಿನ ನೀರಿನಂತೆ. ಒದರಿಕೊಂಡು ಮುಂದೆ ಹೋಗುವುದು.
ಒಂದು ಹಳೆಯ ಇಂಗ್ಲೀಷ್ ಜೋಕ್ ಜ್ನಾಪಕಕ್ಕೆ ಬಂತು. ಒಮ್ಮೆ ಒಬ್ಬ ಪೇದೆ ಬಂದು ಹಿರಿಯ ಅಧಿಕಾರಿಗಳಿಗೆ ಹೇಳಿದನಂತೆ’ Sir, there was a Sindhi gentleman who had come to see you” ಅಂತ. ಆಗ ಅವರು “It can’t be! Either he is a Sindhi or a Gentleman and can’t be both” ಅಂತ ಉದ್ಗರಿಸಿದ್ದರಂತೆ. ಹಾಗೇ ರಾಜಕಾರಣಿ ಅಂದಮೇಲೆ ಜೊತೆಗೆ ಪ್ರಾಮಾಣಿಕ ಅಂತ ಸೇರಿಸಹೋದರೆ ನಗೆಪಾಟಲಿಗೀಡಾಗುತ್ತೇವೆ. ಪ್ರಾಮಾಣಿಕ ರಾಜಕಾರಣಿ ಚತುರ್ಭುಜೆ ಲಕ್ಷ್ಮಿಯಷ್ಟೇ ಅಪರೂಪ, ಅಲಭ್ಯ. ಭ್ರಷ್ಟತೆಯೇ ಅವರ ಹುಟ್ಟುಗುಣ ಅನ್ನೋದು ಜನಜನಿತ.
ರಾಜಕಾರಣ ಇವರಿಗೆಲ್ಲ ಒಂದು ರೀತಿಯ ಆಟವಂತೆ. ಅದಕ್ಕೇ ಇರಬಹುದು “The games politicians play” ಅನ್ನೋ ಪ್ರಚಲಿತ ಹೇಳಿಕೆ. ಇಲ್ಲಿ “ ಏನಾದರೂ ಆಗಬಹುದು” ; “politics is art of the possible”; ‘ there are no permanent friends and foes in politics” ಎಂದೆಲ್ಲ ತಮ್ಮನ್ನು ಸಮರ್ಥಿಸಿಕೋತಾರೆ ಈ ಮಾನಗೆಟ್ಟವರು.
ಒಂದು sport ಅಂದ ಮೇಲೆ ಪ್ರಶಸ್ತಿಗಳು ಬೇಡವೇ. ಇನ್ನು ಸ್ವಲ್ಪೇ ದಿನಗಳಲ್ಲಿ ರಾಜಕೀಯ ದಾಳದಾಟದ ಕೋಚ್ಗಳಿಗೆ ಸಲ್ಲುವ ಪ್ರಥಮ “ದ್ರೋಹಾಚಾರ್ಯ ಪ್ರಶಸ್ತಿ” ನಮ್ಮ ದೇವೇಗೌಡರಿಗೇ ಸಿಗುವುದು ಖಚಿತ ಅಂತ ಸುದ್ದಿ. ಹಾಗೆಯೇ ಗೌಡರಮುಂದೆ “ಮಂಡಿಯೂರಪ್ಪ” ನಾಗಲು ಇಚ್ಛಿಸದೆ ಯಡ್ಡಿಯೂರಪ್ಪ ಅಂತ ಹೆಸರು ಬದಲಿಸಿಕೊಂಡ ಯಡಿಯೂರಪ್ಪನವರಿಗೆ ಚಕ್ರವ್ಯೂಹವನ್ನು ಭೇದಿಸಲಾಗದ “ಅಭಿಮನ್ಯು ಪ್ರಶಸ್ತಿ” ಕೂಡ ಖಂಡಿತ. ಇತ್ತ ಅಪ್ಪನೂ ಬೇಕು, ಅತ್ತ ಶಾಸಕರೂ ಬೇಕು, ಅಧಿಕಾರವೂ ಬೇಕು ಎಂದು ತೀರ್ಮಾನಿಸಲಾಗದೆ ನರ್ತಿಸುತ್ತಿದ್ದ ಕುಮಾರಸ್ವಾಮಿಗೆ “ಅರ್ಜುನ ಪ್ರಶಸ್ತಿ” ಬದಲಾಗಿ ಇವನೂ ಅಲ್ಲದ ಅವಳೂ ಅಲ್ಲದ “ಬೃಹನ್ನಳಾ ಪ್ರಶಸ್ತಿ” ಕೊಡುತ್ತಾರಂತೆ. ಶಾಸಕರನ್ನು ಕೆಡವಲು ದೇವೇಗೌಡರಿಂದ ಮುಂದೆ ಮಾಡಲ್ಪಟ್ಟ ಪ್ರಕಾಶ್ರವರಿಗೆ “ಶಿಖಂಡಿ ಪ್ರಶಸ್ತಿ” ಯೂ ತೀರ್ಮಾನವಾಗಿದೆಯಂತೆ.
ಹೊಯ್ಸಳರ ಕಾಲದಿಂದಲೂ ಸಾಹಿತ್ಯ, ಕಲೆ, ಶಿಲ್ಪಗಳಿಗೆ ಪ್ರಖ್ಯಾತವಾದ ಹಾಸನದ ಹೆಸರನ್ನು ಕೆಸರಾಗಿಸಿದ, ಅಲ್ಲಿಯೇ ಉದ್ಭವವಾದ ಹರದನಹಳ್ಳಿಯ ಮಹಿಷತ್ರಯರ ನಿರ್ಮೂಲನ ಹೇಗೆ? ಆ ಚಾಮುಂಡೇಶ್ವರಿಯೇ ಮತ್ತೊಮ್ಮೆ ಅವತರಿಸಬೇಕಾದೀತೇನೋ! ಈ ಐಡಿಯಾ ಕೇಳಿಸಿಕೊಂಡ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳು ಸೋನಿಯಾರವರಿಗೆ ಚಾಮುಂಡಿಯ ಮೇಕಪ್ ಮಾಡಿ ಅವರ ಕಾಲ ಕೆಳಗಿನ ಮಹಿಷನ ತಲೆಯ ಜಾಗದಲ್ಲಿ ಹಿರಿಯ ಗೌಡರ ತಲೆ ಅಂಟಿಸಿ ಪೋಸ್ಟರ್ ಕೂಡ ಛಪಾಯಿಸಿ ಅಷ್ಟರಲ್ಲೇ ತಮ್ಮ ಸ್ವಾಮಿ(ನಿ)ಭಕ್ತಿ ಪ್ರಸರಿಸುವ ಸಾಧ್ಯತೆಗಳುಂಟು. ರಾಜಾಸ್ಥಾನದಲ್ಲಿ ವಸುಂಧರಾ ರಾಜೆಯವರಿಗೆ ಅನ್ನಪೂರ್ಣೆಯ ವೇಶ ಹಾಕಿಸಿದ ಭಾಜಪ ಮತ್ತು ಇಂತಹದೇ ಕೆಲಸಕ್ಕೆ ಕೈ ಹಾಕಿ ಸೋನಿಯಾಗೆ ದುರ್ಗಾ ವೇಶ ಹಾಕಿಸಿದ ಉತ್ತರಪ್ರದೇಶದ ಕಾಂಗೈ ಪ್ರಯತ್ನದ ನೆನಪುಗಳಿನ್ನೂ ಹಸಿರಾಗಿದೆಯಲ್ಲವೇ?
ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ತನ್ನ ಪ್ರತಿನಿಧಿಯನ್ನು ಚುನಾಯಿಸುವ ಹಕ್ಕಿರುವ ಜನಸಾಮಾನ್ಯನಿಗೆ, ಆಯ್ಕೆಯಾದ ಮೇಲೆ ಅವನ ಮೇಲೆ ಯಾವ ರೀತಿಯ ಹತೋಟಿಯೂ ಇಲ್ಲದಿರುವುದು ಅದೆಂಥ ವಿಪರ್ಯಾಸ? ಚುನಾಯಿತನಾದ ಕೂಡಲೆ ತನ್ನ ನಿಜವಾದ ಬಣ್ಣ ತೋರಿಸುತ್ತ, ಕುರ್ಚಿಗೆ ಅಂಟಿಕೊಂಡು ಪೂರ್ಣ ಅವಧಿಯಲ್ಲಿ ತನ್ನನ್ನು ಆರಿಸಿದವರನ್ನು ಉಪೇಕ್ಷಿಸುವ ರಾಜಕಾರಣಿಯ ಧೈರ್ಯ ಅದೆಷ್ಟು? ನಿಜವಾಗಿಯೂ ಯಾರು ಬಲಿಷ್ಠರು? ಅವರನ್ನು ಚುನಾಯಿಸುವ ನಾವೋ? ರಾಜಕಾರಣಿಗಳೋ? ಬಾಟೆಲಿನಲ್ಲಿದ್ದ ಭೂತವನ್ನು ಹೊರಗೆ ಬಿಟ್ಟು ಮತ್ತೆ ಒಳಗೆ ತೂರಿಸಲಾಗದಂತಹ ಅಸಹಾಯಕರು ನಾವು. ಮೇರಿ ಶೆಲ್ಲಿ ತನ್ನ ಹತ್ತೊಂಬತ್ತರ ವಯಸ್ಸಿನಲ್ಲಿ ಬರೆದ Frankenstein ಕಾದಂಬರಿಯಲ್ಲಿ ವರ್ಣಿಸಿದ ಸೃಷ್ಟಿಕರ್ತನಿಗೇ ಮುಳುವಾದ ರಾಕ್ಷಸನ ನೆನಪಾಗುತ್ತೆ ಈ ರಾಜಕಾರಣಿಗಳನ್ನು ನೋಡಿದಾಗಲೆಲ್ಲ.
ಪರಭಾಷಿಗರ ದಾಳಿಯಿಂದ ಕನ್ನಡವನ್ನು ರಕ್ಷಿಸುವ ಪಣ ತೊಟ್ಟಿರುವ ಕರ್ನಾಟಕ ರಕ್ಷಣಾ ವೇದಿಕೆ ಏಕೆ ತಮ್ಮ ನಿಗದಿತ ಕಾರ್ಯಕ್ರಮದಿಂದ ಸ್ವಲ್ಪ ಹೊರಬಂದು ಕರ್ನಾಟಕವನ್ನು ನಮ್ಮ ಭ್ರಷ್ಟ ರಾಜಕಾರಣಿಗಳಿಂದಲೇ ರಕ್ಷಿಸುವ ಕಾರ್ಯ ಹಮ್ಮಿಕೊಂಡರೆ ಚೆನಾಗಿರುತ್ತಲ್ಲವೇ? ವೇದಿಕೆ ಪಕ್ಷಾತೀತ ಅಂತ ನಮ್ಮ ನಂಬಿಕೆ ತಪ್ಪಲ್ಲ ತಾನೆ? ಮಣ್ಣಿನ ಮಕ್ಕಳನ್ನು ಮತ್ತೆ ಮಣ್ಣಿಗೆ ಮರಳಿಸುವಂಥ ಪವಿತ್ರವಾದ ಕೆಲಸ ಮಾಡಿದರೆ ನಾವೆಲ್ಲ ಅವರಿಗೆ ಚಿರಋಣಿಗಳಾಗಬಹುದಲ್ಲ!
ಮೈಸೂರು ಸ್ಮೆಲ್ಲಿಗೆ … ಗಟ್ಟಿ ಹಿಡಿಯಿರಿ ಮೂಗನು!
( ದಿವಂಗತ ನರಸಿಂಹಸ್ವಾಮಿಯವರನ್ನು ನೆನೆಸಿ, ನಮಿಸಿ, ಕ್ಷಮೆಯಾಚಿಸುತ್ತ)
- ನವರತ್ನ ಸುಧೀರ್
ನೋಡಿರಣ್ಣ ಹೇಗಿದೆ ಕರ್… ನಾಟಕ
ಮದುವೆ ಮುರಿದು ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ಯಡ್ಡಿ ಕೂಗಿದಾಗಲೆಲ್ಲ ಬರುವನಣ್ಣ ಕುಮಾರನು
ಹಿಂದೆ ಮುಂದೆ ನೋಡದೆ ಗೌಡರ ಮಾತ ಕೇಳದೆ
ಯಾರೆ ಎಷ್ಟು ಉಗಿದರೇನು ಬಿದ್ದು ಬಿದ್ದು ನಕ್ಕರೇನು
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮರಾಗ
ಮರಳಿ ಅರಳಿ ಭಾಜಪವನು ತಾನೆ ಕೂಗಿ ಬೇಡಿ ಕರೆದು
ಅವರ ಹರಸಿ ಕರೆವುದು ಬಂಧುಮಿತ್ರ ಎನುವುದು
ಕೆಂದಾವರೆಯನು ಅರಳಿಸಿ ಅಪ್ಪಿ ಮುತ್ತನಿಡುವುದು.
ಇಂದು ಮುತ್ತನ್ನಿಡುವುದು ನಾಳೆ ಕಚ್ಚಾಡುವುದು
ನಮ್ಕುಮಾರನ್ ನಾಟಕ ಮಾಡೋದೆಲ್ಲಾ ಪಾತಕ
ಇವನದದೆಂಥಾ ಜಾತಕ ಕರ್ -ನಾಟಕದ ಕಂಟಕ
ನೋಡಿರಣ್ಣ ಹೇಗಿದೆ ಕರುನಾಡ ಭಾಗ್ಯ ಹೀಗೇಕಿದೆ?
**********************************
ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು.
ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು
ಚಂದ್ರನೆ ಕಾಣದ ಬಾನಿನಲೆಲ್ಲಾ ಮುಗಿಲೇ ತುಂಬಿತ್ತು
ಬಾನಲಿ ಕಾರ್ಮುಗಿಲು ಕವಿದಿತ್ತು.
ಗೌಡರಮನೆಯಲಿ ಹಳಸಿದ ಸಾರಿನ ನಾತವೆ ತುಂಬಿತ್ತು.
ಹೊರಗೆನಿಂತ ಜನಜಂಗುಳಿಯಿದ್ದೂ ಒಳಗಡೆ ದೀಪವಾರಿ ನೀರವ ಕವಿದಿತ್ತು.
ರೇವಣ್ಣನ ಗುಸುಪಿಸು ಮಾತನು ಕೇಳುತ ಕೂತಿದ್ದರು ಗೌಡ
ಕುರ್ಚಿಯ ಕನಸಲಿ ಮುಳುಗಿದ ಯಡ್ಡಿಗೆ ಸ್ವರ್ಗವೇ ದಕ್ಕಿತ್ತು.
ಪ್ರಮಾಣ ವಚನಕೆ ಕರೆಯಲು ಬಂದೆನು ನಿಮ್ಮನು ನಾನೆನುತ ಯಡ್ಡಿಯು ಹೇಳಲು
ಊರಲ್ಲಿದ್ದರೆ ಖಂಡಿತ ಬರುವೆನು ಎಂದರು ಗೌಡರು ಬಿಗುವಿನಲಿ
ಹೊತ್ತಾಯಿತು ಸರಿ ಹೊರಡುವೆನೆಂದರು ಯಡ್ಡಿಯು ಹರುಷದಲಿ
ಹೋಗೋ ಮಗನೆ ಹೋಗುವೆ ಎಲ್ಲಿಗೆ ನೋಡುವೆ ಅಂದರು ಗೌಡರು ಮನಸಿನಲಿ.
**************************************************
ನಿನ್ನ ಪ್ರೇಮದ ಪರಿಯ ನಾನರಿಯೆ...
ನಿನ್ನ ಪ್ರೇಮದಪರಿಯ ನಾನರಿಯೆ ಕುಮಾರಣ್ಣ
ನಿನ್ನೊಳಿದೆ ನನ್ನ ಮನಸು
ಅಧಿಕಾರದಾಸೆಯಿಂದುಕ್ಕುವುದು ಕಡಲಾಗಿ
ನಿನ್ನ ಬೆಂಬಲವನರಸಿ
ನಿನ್ನೊಳಿದೆ ನನ್ನ ಮನಸು
ಗೌಡರಾ ಹೃದಯದಲಿ ಸ್ವಲ್ಪವೂ ಒಲವಿಲ್ಲ
ಅಂತರಿತು ಯಾರೇನೆಲ್ಲ ಹೇಳಿದರೂ
ನಿನ್ನ ಬೆಂಬಲವರಸಿ
ನಾನು ಬಂದಿಹೆನು
ನಿನ್ನೊಳಿದೆ ನನ್ನ ಮನಸು
ನಂಬಿ ಕೆಟ್ಟವರಿಲ್ಲ ಎಂಬ ಮಾತನು ನಂಬಿ
ನೀ ಹೇಳಿದನು ನಂಬಿ
ಮಾನ ಮನೆಯಲಿ ಬಿಟ್ಟು
ಜೊತೆಸೇರುವೆನು
ನಿನ್ನೊಳಿದೆ ನನ್ನ ಮನಸು
**************************************
- ನವರತ್ನ ಸುಧೀರ್
ನೋಡಿರಣ್ಣ ಹೇಗಿದೆ ಕರ್… ನಾಟಕ
ಮದುವೆ ಮುರಿದು ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ಯಡ್ಡಿ ಕೂಗಿದಾಗಲೆಲ್ಲ ಬರುವನಣ್ಣ ಕುಮಾರನು
ಹಿಂದೆ ಮುಂದೆ ನೋಡದೆ ಗೌಡರ ಮಾತ ಕೇಳದೆ
ಯಾರೆ ಎಷ್ಟು ಉಗಿದರೇನು ಬಿದ್ದು ಬಿದ್ದು ನಕ್ಕರೇನು
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮರಾಗ
ಮರಳಿ ಅರಳಿ ಭಾಜಪವನು ತಾನೆ ಕೂಗಿ ಬೇಡಿ ಕರೆದು
ಅವರ ಹರಸಿ ಕರೆವುದು ಬಂಧುಮಿತ್ರ ಎನುವುದು
ಕೆಂದಾವರೆಯನು ಅರಳಿಸಿ ಅಪ್ಪಿ ಮುತ್ತನಿಡುವುದು.
ಇಂದು ಮುತ್ತನ್ನಿಡುವುದು ನಾಳೆ ಕಚ್ಚಾಡುವುದು
ನಮ್ಕುಮಾರನ್ ನಾಟಕ ಮಾಡೋದೆಲ್ಲಾ ಪಾತಕ
ಇವನದದೆಂಥಾ ಜಾತಕ ಕರ್ -ನಾಟಕದ ಕಂಟಕ
ನೋಡಿರಣ್ಣ ಹೇಗಿದೆ ಕರುನಾಡ ಭಾಗ್ಯ ಹೀಗೇಕಿದೆ?
**********************************
ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು.
ಯಡ್ಡಿಯು ಬಂದರು ಗೌಡರ ಮನೆಗೆ ರಾತ್ರಿಯಾಗಿತ್ತು
ಚಂದ್ರನೆ ಕಾಣದ ಬಾನಿನಲೆಲ್ಲಾ ಮುಗಿಲೇ ತುಂಬಿತ್ತು
ಬಾನಲಿ ಕಾರ್ಮುಗಿಲು ಕವಿದಿತ್ತು.
ಗೌಡರಮನೆಯಲಿ ಹಳಸಿದ ಸಾರಿನ ನಾತವೆ ತುಂಬಿತ್ತು.
ಹೊರಗೆನಿಂತ ಜನಜಂಗುಳಿಯಿದ್ದೂ ಒಳಗಡೆ ದೀಪವಾರಿ ನೀರವ ಕವಿದಿತ್ತು.
ರೇವಣ್ಣನ ಗುಸುಪಿಸು ಮಾತನು ಕೇಳುತ ಕೂತಿದ್ದರು ಗೌಡ
ಕುರ್ಚಿಯ ಕನಸಲಿ ಮುಳುಗಿದ ಯಡ್ಡಿಗೆ ಸ್ವರ್ಗವೇ ದಕ್ಕಿತ್ತು.
ಪ್ರಮಾಣ ವಚನಕೆ ಕರೆಯಲು ಬಂದೆನು ನಿಮ್ಮನು ನಾನೆನುತ ಯಡ್ಡಿಯು ಹೇಳಲು
ಊರಲ್ಲಿದ್ದರೆ ಖಂಡಿತ ಬರುವೆನು ಎಂದರು ಗೌಡರು ಬಿಗುವಿನಲಿ
ಹೊತ್ತಾಯಿತು ಸರಿ ಹೊರಡುವೆನೆಂದರು ಯಡ್ಡಿಯು ಹರುಷದಲಿ
ಹೋಗೋ ಮಗನೆ ಹೋಗುವೆ ಎಲ್ಲಿಗೆ ನೋಡುವೆ ಅಂದರು ಗೌಡರು ಮನಸಿನಲಿ.
**************************************************
ನಿನ್ನ ಪ್ರೇಮದ ಪರಿಯ ನಾನರಿಯೆ...
ನಿನ್ನ ಪ್ರೇಮದಪರಿಯ ನಾನರಿಯೆ ಕುಮಾರಣ್ಣ
ನಿನ್ನೊಳಿದೆ ನನ್ನ ಮನಸು
ಅಧಿಕಾರದಾಸೆಯಿಂದುಕ್ಕುವುದು ಕಡಲಾಗಿ
ನಿನ್ನ ಬೆಂಬಲವನರಸಿ
ನಿನ್ನೊಳಿದೆ ನನ್ನ ಮನಸು
ಗೌಡರಾ ಹೃದಯದಲಿ ಸ್ವಲ್ಪವೂ ಒಲವಿಲ್ಲ
ಅಂತರಿತು ಯಾರೇನೆಲ್ಲ ಹೇಳಿದರೂ
ನಿನ್ನ ಬೆಂಬಲವರಸಿ
ನಾನು ಬಂದಿಹೆನು
ನಿನ್ನೊಳಿದೆ ನನ್ನ ಮನಸು
ನಂಬಿ ಕೆಟ್ಟವರಿಲ್ಲ ಎಂಬ ಮಾತನು ನಂಬಿ
ನೀ ಹೇಳಿದನು ನಂಬಿ
ಮಾನ ಮನೆಯಲಿ ಬಿಟ್ಟು
ಜೊತೆಸೇರುವೆನು
ನಿನ್ನೊಳಿದೆ ನನ್ನ ಮನಸು
**************************************
Friday, 2 November 2007
ಮುಖೇಶ್ ವಿಶ್ವದ ನಂ.1ಕುಬೇರ: ಈ ಸುದ್ದಿ ನಂಬಬೇಡಿ!
thatskannada.com ಬುಧವಾರ, 31 ಅಕ್ಟೋಬರ್ 2007, 12:7 Hrs (IST) ಮೇಲಿನ ಶೀರ್ಶಿಕೆಯಲ್ಲಿ ಕೆಳಕಂಡ ಸುದ್ದಿ ಪ್ರಕಟಿಸಿತ್ತು.
ನವದೆಹಲಿ, ಅ.31 : ಗೂಟ ಕಿತ್ತುಕೊಂಡು ಓಡಿದ ಗೂಳಿಯ ವೇಗಕ್ಕೆ ಷೇರುಪೇಟೆ ತಲ್ಲಣಗೊಂಡಿದ್ದು, ಪತ್ರಿಕೆಗಳೂ ಸೇರಿದಂತೆ ಸಮಸ್ತ ಮಾಧ್ಯಮ ‘ವಿಶ್ವದ ನಂ.1 ಶ್ರೀಮಂತ ಮುಖೇಶ್ ಅಂಬಾನಿ" ಎನ್ನುವ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಇದು ಸುಳ್ಳು ಎಂದು ರಿಲಯನ್ಸ್ ತಿಳಿಸಿದೆ.
ಹಲವು ಓದುಗರ ಪ್ರತಿಕ್ರಿಯೆಗಳು ಕೆಳಗಿನಂತಿದ್ದವು.
amavaasye gowda IP: 99.247.108.22
Mukesh Ambani viswada athi dooda srimanthanagodu, namma Mandyada beedi nayige avali javali hennu santhana aagodoo ella onde. Papi sampadane parara paalige anno haage Bharathada badathana inthavarinda hechagideye vinah berilla.
(Posted on: Wednesday 31st of October 2007 07:56:12 PM)
madhu IP: 221.135.55.5
if Mukesh ambani becomes richest person on world what is the use.For information bill gates giving lot of his wealth to poor people around the world.what about ambani's?.only satisfaction we indians will have he is indian!!!
(Posted on: Wednesday 31st of October 2007 12:24:08 PM)
--Gowda IP: 125.17.137.181 192.168.42.88
Yes, u r right.Bill Gates has also donated so much to poor people in India. Most of the people are misguided by today's newspaper headlines and will the newspapers correct the error???We need to find it out tomorrow...else people would think he is the richest.
ನನ್ನ ಪ್ರತಿಕ್ರಿಯೆ ಕೆಳಗಿದೆ ಓದಿ.
ನವರತ್ನ ಸುಧೀರ್ IP: 122.167.3.48
ನಾವು ಅವರನ್ನು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಅಂತ ಪರಿಗಣಿಸುತ್ತೀವೋ ಇಲ್ಲವೋ ಎನ್ನುವುದರ ಬಗ್ಗೆ ಮುಕೇಶ್ ಅಂಬಾನಿಯವರು ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ! ಆಶ್ಚರ್ಯದ ವಿಚಾರ ಏನು ಅಂದರೆ ಅವರ ಶ್ರೀಮಂತಿಕೆ ಬಗ್ಗೆ ಜನಸಾಮಾನ್ಯರಲ್ಲಿರುವ ಅಸೂಯೆ. ಯಾರಾದರೂ ಐಶ್ವರ್ಯವಂತರಾದರೂ ಅಂತ ತಿಳಿದ ಕೂಡಲೆ ನಾಲಿಗೆಗಳು ಸಡಿಲವಾಗಿ ಹರಿದು ಅವನು ಹಾಗೆ ಮಾಡಿರಬೇಕು ಹೀಗೆ ಮಾಡಿರಬೇಕು ಇಲ್ಲದಿದ್ದರೆ ಯಾರಾದರೂ ಕಷ್ಟ ಪಟ್ಟು ಅವನಷ್ಟು ಐಶ್ವರ್ಯ ಗಳಿಸಲು ಸಾಧ್ಯವೆ ಅಂತ ಕೊಂಕು ಮಾತುಗಳು ಶುರುವಾಗಿಬಿಡುತ್ತೆ. ಅದೇಕೆ ಹೀಗೆ? ಅವರು ಈ ಮಟ್ಟಕ್ಕೆ ಬರಲು ಅವರು ಪಟ್ಟ ಕಷ್ಟ, ಅವರ ಮನಸ್ಸಿನ ಧೃಢತೆ, ಸಾಧಿಸಿಯೇ ತೀರುವ ಛಲ, ಸಾಮಾನ್ಯರು ಊಹಿಸಲೂ ಆಗದಂಥ ವಿರಾಟ್ ಸ್ವಪ್ನ ನೋಡಿ ಅದನ್ನು ಸಾಕಾರಗೊಳಿಸಲು ಕಾರ್ಯಶೀಲರಾಗುವ ಎದೆಗಾರಿಕೆ, ದಾರಿಯಲ್ಲಿ ಬರುವ ಅಡ್ಡಿ ಆತಂಕಗಳಿಂದ ನಿರಾಶರಾಗದೆ ತಮ್ಮ ಗುರಿಯತ್ತ ನಡೆಯುವ ಏಕಾಗ್ರತೆಗಳು ನಮಗೇಕೆ ಗೋಚರವಾಗುವುದಿಲ್ಲ? ನಮ್ಮ ರಾಜಕಾರಣಿಗಳು ಸೋಷ್ಯಲಿಸಂ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನುಬಡವ ಹಾಗೂ ಶ್ರೀಮಂತ ಅಂತ ಒಡೆದು ಶ್ರೀಮಂತರು ಹಾಗೂ ಔದ್ಯಮಿಗಳೆಲ್ಲರೂ ಬಡವರ ರಕ್ತ ಹೀರಿಯೇ ಸಂಭ್ರಮಿಸುವ ಲಾಭಕೋರರು , ವ್ಯವಹಾರದಲ್ಲಿ “ಲಾಭ” ಮಾಡುವುದೆಂದರೆ ಬಹಳ ಹೀನ ಅಪರಾಧ ಎಂದೆಲ್ಲ ತಪ್ಪು ಭಾವನೆಗಳನ್ನು ಪ್ರಸರಿಸಿ, ಬಡತನದಲ್ಲಿರುವ ಅಥವಾ ಇಲ್ಲದೆಯೂ ಇರಬಹುದಾದ ಸತ್ಯತೆ ಹಾಗೂ ಪ್ರಾಮಾಣಿಕತೆಯ ಗುಣಗಾನ ಮಾಡುತ್ತ, ಕೆಲಸ ಮಾಡದ ಬಡವನಿಗೂ, ಸೋಮಾರಿಗಳಿಗೂ ಸಮಾಜದ ಸಂಪತ್ತಿನಲ್ಲಿ ಸಮಾನ ಪಾಲಿರುವ ಹಕ್ಕಿನ ದುರಾಸೆ ತೋರಿಸಿ ಇರುವವರದನ್ನು ಕಿತ್ತುಕೊಂಡು ಇರದವರಿಗೆ ಹಂಚುವ ಸಂಚು ನಡಿಸುತ್ತಿರುವುದು ನಮಗೆ ಕಾಣುವುದಿಲ್ಲವೇ? ಹಣ ಸಂಪಾದಿಸಲು ತಪ್ಪು ಹಾದಿ ಹಿಡಿದು ಅನ್ಯಾಯವಾಗಿ ಕಾನೂನು ಬಾಹಿರ ಹಾದಿ ತುಳಿದವರು ಅನೇಕರಿರಬಹುದು. ಆದರೆ ಎಲ್ಲರಿಗೂ ಸಮಾನ ಪಾಲು ಕೊಡಲಾಗಲು ಇನ್ನೂ ಹೆಚ್ಚಿನ ಸಂಪತ್ತು ಸೃಷ್ಟಿ ಮಾಡುವ ಸಕಾರಾತ್ಮಕ ಕೆಲಸ ಮಾಡುವ ಸದುದ್ದೇಶದ ಉದ್ಯಮಿಗಳೆಲ್ಲರನ್ನೂ ಹೀನರೂ, ಖೂಳರೂ, ಸಮಾಜದ ಶತ್ರುಗಳು ಅಂತ ಒಂದೇ ಬಣ್ಣ ಬಳಿಯುವುದು ಯಾವ ನ್ಯಾಯ? ನಾನು ನೀತಿವಂತ, ಪ್ರಾಮಾಣಿಕ ಅನ್ನೋಕ್ಕೆ “ಬಡತನ”ದ ಸರ್ಟಿಫಿಕೇಟ್ ಬೇಕೆ? ಪ್ರಪಂಚದ ಬೇರೆಡೆಯಲ್ಲೆಲ್ಲ ಉತ್ತಮ ಗುಣಮಟ್ಟಕ್ಕಾಗಿ ಶ್ರಮಿಸುತ್ತಿದ್ದಾಗ ನಮ್ಮ ದೇಶದಲ್ಲಿ ಮಾತ್ರ ’ಮೆರಿಟೋಕ್ರೆಸಿ’ಗೆ ಎಳ್ಳು ನೀರು ಬಿಟ್ಟು “ ಮೀಡಿಯೋಕ್ರಿಟಿ” ಗೆ ಆಹ್ವಾನ ಕೊಡುತ್ತಿದ್ದೇವಲ್ಲ? ಒಬ್ಬರ ಯಶಸ್ಸನ್ನು ಕಂಡು ಸಂಭ್ರಮಿಸೋ ಗುಣ ನಮಗೆ ಯಾವಾಗ ಬರುತ್ತೆ? ಐ. ಟಿ. ಕ್ಷೇತ್ರದಲ್ಲಿ ಬೆಳಗಿ ಕಷ್ಟ ಪಟ್ಟು ದುಡಿದು ಭಾರತದಲ್ಲೂ ಹಾಗೂ ವಿದೇಶಗಳಲ್ಲೂ ಐಶ್ವರ್ಯವಂತರಾಗುತ್ತಿರುವ ನಮ್ಮದೇ ಕನ್ನಡದ ಮಕ್ಕಳನ್ನೂ ನಾವು ಹೀಗೆ ಅಸೂಯೆಯಿಂದ ಹೀನಾಯಿಸುತ್ತೀವಾ? ಅಂಬಾನಿ ಅದೆಷ್ಟು ಹಣ ಸಮಾಜಕ್ಕೆ ಗೌಪ್ಯವಾಗಿ ದಾನ ಮಾಡಿದ್ದಾರೋ ಯಾರಿಗೆ ಗೊತ್ತು? ಎಲ್ಲರೂ ಅಮೃತಶಿಲೆಯ ಫಲಕ ಅಪೇಕ್ಷಿಸುವುದಿಲ್ಲ.
(Posted on: Thursday 01st of November 2007 07:34:30 PM)
ನವದೆಹಲಿ, ಅ.31 : ಗೂಟ ಕಿತ್ತುಕೊಂಡು ಓಡಿದ ಗೂಳಿಯ ವೇಗಕ್ಕೆ ಷೇರುಪೇಟೆ ತಲ್ಲಣಗೊಂಡಿದ್ದು, ಪತ್ರಿಕೆಗಳೂ ಸೇರಿದಂತೆ ಸಮಸ್ತ ಮಾಧ್ಯಮ ‘ವಿಶ್ವದ ನಂ.1 ಶ್ರೀಮಂತ ಮುಖೇಶ್ ಅಂಬಾನಿ" ಎನ್ನುವ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಇದು ಸುಳ್ಳು ಎಂದು ರಿಲಯನ್ಸ್ ತಿಳಿಸಿದೆ.
ಹಲವು ಓದುಗರ ಪ್ರತಿಕ್ರಿಯೆಗಳು ಕೆಳಗಿನಂತಿದ್ದವು.
amavaasye gowda IP: 99.247.108.22
Mukesh Ambani viswada athi dooda srimanthanagodu, namma Mandyada beedi nayige avali javali hennu santhana aagodoo ella onde. Papi sampadane parara paalige anno haage Bharathada badathana inthavarinda hechagideye vinah berilla.
(Posted on: Wednesday 31st of October 2007 07:56:12 PM)
madhu IP: 221.135.55.5
if Mukesh ambani becomes richest person on world what is the use.For information bill gates giving lot of his wealth to poor people around the world.what about ambani's?.only satisfaction we indians will have he is indian!!!
(Posted on: Wednesday 31st of October 2007 12:24:08 PM)
--Gowda IP: 125.17.137.181 192.168.42.88
Yes, u r right.Bill Gates has also donated so much to poor people in India. Most of the people are misguided by today's newspaper headlines and will the newspapers correct the error???We need to find it out tomorrow...else people would think he is the richest.
ನನ್ನ ಪ್ರತಿಕ್ರಿಯೆ ಕೆಳಗಿದೆ ಓದಿ.
ನವರತ್ನ ಸುಧೀರ್ IP: 122.167.3.48
ನಾವು ಅವರನ್ನು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಅಂತ ಪರಿಗಣಿಸುತ್ತೀವೋ ಇಲ್ಲವೋ ಎನ್ನುವುದರ ಬಗ್ಗೆ ಮುಕೇಶ್ ಅಂಬಾನಿಯವರು ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ! ಆಶ್ಚರ್ಯದ ವಿಚಾರ ಏನು ಅಂದರೆ ಅವರ ಶ್ರೀಮಂತಿಕೆ ಬಗ್ಗೆ ಜನಸಾಮಾನ್ಯರಲ್ಲಿರುವ ಅಸೂಯೆ. ಯಾರಾದರೂ ಐಶ್ವರ್ಯವಂತರಾದರೂ ಅಂತ ತಿಳಿದ ಕೂಡಲೆ ನಾಲಿಗೆಗಳು ಸಡಿಲವಾಗಿ ಹರಿದು ಅವನು ಹಾಗೆ ಮಾಡಿರಬೇಕು ಹೀಗೆ ಮಾಡಿರಬೇಕು ಇಲ್ಲದಿದ್ದರೆ ಯಾರಾದರೂ ಕಷ್ಟ ಪಟ್ಟು ಅವನಷ್ಟು ಐಶ್ವರ್ಯ ಗಳಿಸಲು ಸಾಧ್ಯವೆ ಅಂತ ಕೊಂಕು ಮಾತುಗಳು ಶುರುವಾಗಿಬಿಡುತ್ತೆ. ಅದೇಕೆ ಹೀಗೆ? ಅವರು ಈ ಮಟ್ಟಕ್ಕೆ ಬರಲು ಅವರು ಪಟ್ಟ ಕಷ್ಟ, ಅವರ ಮನಸ್ಸಿನ ಧೃಢತೆ, ಸಾಧಿಸಿಯೇ ತೀರುವ ಛಲ, ಸಾಮಾನ್ಯರು ಊಹಿಸಲೂ ಆಗದಂಥ ವಿರಾಟ್ ಸ್ವಪ್ನ ನೋಡಿ ಅದನ್ನು ಸಾಕಾರಗೊಳಿಸಲು ಕಾರ್ಯಶೀಲರಾಗುವ ಎದೆಗಾರಿಕೆ, ದಾರಿಯಲ್ಲಿ ಬರುವ ಅಡ್ಡಿ ಆತಂಕಗಳಿಂದ ನಿರಾಶರಾಗದೆ ತಮ್ಮ ಗುರಿಯತ್ತ ನಡೆಯುವ ಏಕಾಗ್ರತೆಗಳು ನಮಗೇಕೆ ಗೋಚರವಾಗುವುದಿಲ್ಲ? ನಮ್ಮ ರಾಜಕಾರಣಿಗಳು ಸೋಷ್ಯಲಿಸಂ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನುಬಡವ ಹಾಗೂ ಶ್ರೀಮಂತ ಅಂತ ಒಡೆದು ಶ್ರೀಮಂತರು ಹಾಗೂ ಔದ್ಯಮಿಗಳೆಲ್ಲರೂ ಬಡವರ ರಕ್ತ ಹೀರಿಯೇ ಸಂಭ್ರಮಿಸುವ ಲಾಭಕೋರರು , ವ್ಯವಹಾರದಲ್ಲಿ “ಲಾಭ” ಮಾಡುವುದೆಂದರೆ ಬಹಳ ಹೀನ ಅಪರಾಧ ಎಂದೆಲ್ಲ ತಪ್ಪು ಭಾವನೆಗಳನ್ನು ಪ್ರಸರಿಸಿ, ಬಡತನದಲ್ಲಿರುವ ಅಥವಾ ಇಲ್ಲದೆಯೂ ಇರಬಹುದಾದ ಸತ್ಯತೆ ಹಾಗೂ ಪ್ರಾಮಾಣಿಕತೆಯ ಗುಣಗಾನ ಮಾಡುತ್ತ, ಕೆಲಸ ಮಾಡದ ಬಡವನಿಗೂ, ಸೋಮಾರಿಗಳಿಗೂ ಸಮಾಜದ ಸಂಪತ್ತಿನಲ್ಲಿ ಸಮಾನ ಪಾಲಿರುವ ಹಕ್ಕಿನ ದುರಾಸೆ ತೋರಿಸಿ ಇರುವವರದನ್ನು ಕಿತ್ತುಕೊಂಡು ಇರದವರಿಗೆ ಹಂಚುವ ಸಂಚು ನಡಿಸುತ್ತಿರುವುದು ನಮಗೆ ಕಾಣುವುದಿಲ್ಲವೇ? ಹಣ ಸಂಪಾದಿಸಲು ತಪ್ಪು ಹಾದಿ ಹಿಡಿದು ಅನ್ಯಾಯವಾಗಿ ಕಾನೂನು ಬಾಹಿರ ಹಾದಿ ತುಳಿದವರು ಅನೇಕರಿರಬಹುದು. ಆದರೆ ಎಲ್ಲರಿಗೂ ಸಮಾನ ಪಾಲು ಕೊಡಲಾಗಲು ಇನ್ನೂ ಹೆಚ್ಚಿನ ಸಂಪತ್ತು ಸೃಷ್ಟಿ ಮಾಡುವ ಸಕಾರಾತ್ಮಕ ಕೆಲಸ ಮಾಡುವ ಸದುದ್ದೇಶದ ಉದ್ಯಮಿಗಳೆಲ್ಲರನ್ನೂ ಹೀನರೂ, ಖೂಳರೂ, ಸಮಾಜದ ಶತ್ರುಗಳು ಅಂತ ಒಂದೇ ಬಣ್ಣ ಬಳಿಯುವುದು ಯಾವ ನ್ಯಾಯ? ನಾನು ನೀತಿವಂತ, ಪ್ರಾಮಾಣಿಕ ಅನ್ನೋಕ್ಕೆ “ಬಡತನ”ದ ಸರ್ಟಿಫಿಕೇಟ್ ಬೇಕೆ? ಪ್ರಪಂಚದ ಬೇರೆಡೆಯಲ್ಲೆಲ್ಲ ಉತ್ತಮ ಗುಣಮಟ್ಟಕ್ಕಾಗಿ ಶ್ರಮಿಸುತ್ತಿದ್ದಾಗ ನಮ್ಮ ದೇಶದಲ್ಲಿ ಮಾತ್ರ ’ಮೆರಿಟೋಕ್ರೆಸಿ’ಗೆ ಎಳ್ಳು ನೀರು ಬಿಟ್ಟು “ ಮೀಡಿಯೋಕ್ರಿಟಿ” ಗೆ ಆಹ್ವಾನ ಕೊಡುತ್ತಿದ್ದೇವಲ್ಲ? ಒಬ್ಬರ ಯಶಸ್ಸನ್ನು ಕಂಡು ಸಂಭ್ರಮಿಸೋ ಗುಣ ನಮಗೆ ಯಾವಾಗ ಬರುತ್ತೆ? ಐ. ಟಿ. ಕ್ಷೇತ್ರದಲ್ಲಿ ಬೆಳಗಿ ಕಷ್ಟ ಪಟ್ಟು ದುಡಿದು ಭಾರತದಲ್ಲೂ ಹಾಗೂ ವಿದೇಶಗಳಲ್ಲೂ ಐಶ್ವರ್ಯವಂತರಾಗುತ್ತಿರುವ ನಮ್ಮದೇ ಕನ್ನಡದ ಮಕ್ಕಳನ್ನೂ ನಾವು ಹೀಗೆ ಅಸೂಯೆಯಿಂದ ಹೀನಾಯಿಸುತ್ತೀವಾ? ಅಂಬಾನಿ ಅದೆಷ್ಟು ಹಣ ಸಮಾಜಕ್ಕೆ ಗೌಪ್ಯವಾಗಿ ದಾನ ಮಾಡಿದ್ದಾರೋ ಯಾರಿಗೆ ಗೊತ್ತು? ಎಲ್ಲರೂ ಅಮೃತಶಿಲೆಯ ಫಲಕ ಅಪೇಕ್ಷಿಸುವುದಿಲ್ಲ.
(Posted on: Thursday 01st of November 2007 07:34:30 PM)
Subscribe to:
Posts (Atom)