Friday 2 November 2007

ಮುಖೇಶ್ ವಿಶ್ವದ ನಂ.1ಕುಬೇರ: ಈ ಸುದ್ದಿ ನಂಬಬೇಡಿ!

thatskannada.com ಬುಧವಾರ, 31 ಅಕ್ಟೋಬರ್ 2007, 12:7 Hrs (IST) ಮೇಲಿನ ಶೀರ್ಶಿಕೆಯಲ್ಲಿ ಕೆಳಕಂಡ ಸುದ್ದಿ ಪ್ರಕಟಿಸಿತ್ತು.

ನವದೆಹಲಿ, ಅ.31 : ಗೂಟ ಕಿತ್ತುಕೊಂಡು ಓಡಿದ ಗೂಳಿಯ ವೇಗಕ್ಕೆ ಷೇರುಪೇಟೆ ತಲ್ಲಣಗೊಂಡಿದ್ದು, ಪತ್ರಿಕೆಗಳೂ ಸೇರಿದಂತೆ ಸಮಸ್ತ ಮಾಧ್ಯಮ ‘ವಿಶ್ವದ ನಂ.1 ಶ್ರೀಮಂತ ಮುಖೇಶ್ ಅಂಬಾನಿ" ಎನ್ನುವ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಇದು ಸುಳ್ಳು ಎಂದು ರಿಲಯನ್ಸ್ ತಿಳಿಸಿದೆ.

ಹಲವು ಓದುಗರ ಪ್ರತಿಕ್ರಿಯೆಗಳು ಕೆಳಗಿನಂತಿದ್ದವು.

amavaasye gowda IP: 99.247.108.22
Mukesh Ambani viswada athi dooda srimanthanagodu, namma Mandyada beedi nayige avali javali hennu santhana aagodoo ella onde. Papi sampadane parara paalige anno haage Bharathada badathana inthavarinda hechagideye vinah berilla.
(Posted on: Wednesday 31st of October 2007 07:56:12 PM)

madhu IP: 221.135.55.5
if Mukesh ambani becomes richest person on world what is the use.For information bill gates giving lot of his wealth to poor people around the world.what about ambani's?.only satisfaction we indians will have he is indian!!!
(Posted on: Wednesday 31st of October 2007 12:24:08 PM)

--Gowda IP: 125.17.137.181 192.168.42.88
Yes, u r right.Bill Gates has also donated so much to poor people in India. Most of the people are misguided by today's newspaper headlines and will the newspapers correct the error???We need to find it out tomorrow...else people would think he is the richest.

ನನ್ನ ಪ್ರತಿಕ್ರಿಯೆ ಕೆಳಗಿದೆ ಓದಿ.

ನವರತ್ನ ಸುಧೀರ್ IP: 122.167.3.48
ನಾವು ಅವರನ್ನು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಅಂತ ಪರಿಗಣಿಸುತ್ತೀವೋ ಇಲ್ಲವೋ ಎನ್ನುವುದರ ಬಗ್ಗೆ ಮುಕೇಶ್ ಅಂಬಾನಿಯವರು ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ! ಆಶ್ಚರ್ಯದ ವಿಚಾರ ಏನು ಅಂದರೆ ಅವರ ಶ್ರೀಮಂತಿಕೆ ಬಗ್ಗೆ ಜನಸಾಮಾನ್ಯರಲ್ಲಿರುವ ಅಸೂಯೆ. ಯಾರಾದರೂ ಐಶ್ವರ್ಯವಂತರಾದರೂ ಅಂತ ತಿಳಿದ ಕೂಡಲೆ ನಾಲಿಗೆಗಳು ಸಡಿಲವಾಗಿ ಹರಿದು ಅವನು ಹಾಗೆ ಮಾಡಿರಬೇಕು ಹೀಗೆ ಮಾಡಿರಬೇಕು ಇಲ್ಲದಿದ್ದರೆ ಯಾರಾದರೂ ಕಷ್ಟ ಪಟ್ಟು ಅವನಷ್ಟು ಐಶ್ವರ್ಯ ಗಳಿಸಲು ಸಾಧ್ಯವೆ ಅಂತ ಕೊಂಕು ಮಾತುಗಳು ಶುರುವಾಗಿಬಿಡುತ್ತೆ. ಅದೇಕೆ ಹೀಗೆ? ಅವರು ಈ ಮಟ್ಟಕ್ಕೆ ಬರಲು ಅವರು ಪಟ್ಟ ಕಷ್ಟ, ಅವರ ಮನಸ್ಸಿನ ಧೃಢತೆ, ಸಾಧಿಸಿಯೇ ತೀರುವ ಛಲ, ಸಾಮಾನ್ಯರು ಊಹಿಸಲೂ ಆಗದಂಥ ವಿರಾಟ್ ಸ್ವಪ್ನ ನೋಡಿ ಅದನ್ನು ಸಾಕಾರಗೊಳಿಸಲು ಕಾರ್ಯಶೀಲರಾಗುವ ಎದೆಗಾರಿಕೆ, ದಾರಿಯಲ್ಲಿ ಬರುವ ಅಡ್ಡಿ ಆತಂಕಗಳಿಂದ ನಿರಾಶರಾಗದೆ ತಮ್ಮ ಗುರಿಯತ್ತ ನಡೆಯುವ ಏಕಾಗ್ರತೆಗಳು ನಮಗೇಕೆ ಗೋಚರವಾಗುವುದಿಲ್ಲ? ನಮ್ಮ ರಾಜಕಾರಣಿಗಳು ಸೋಷ್ಯಲಿಸಂ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನುಬಡವ ಹಾಗೂ ಶ್ರೀಮಂತ ಅಂತ ಒಡೆದು ಶ್ರೀಮಂತರು ಹಾಗೂ ಔದ್ಯಮಿಗಳೆಲ್ಲರೂ ಬಡವರ ರಕ್ತ ಹೀರಿಯೇ ಸಂಭ್ರಮಿಸುವ ಲಾಭಕೋರರು , ವ್ಯವಹಾರದಲ್ಲಿ “ಲಾಭ” ಮಾಡುವುದೆಂದರೆ ಬಹಳ ಹೀನ ಅಪರಾಧ ಎಂದೆಲ್ಲ ತಪ್ಪು ಭಾವನೆಗಳನ್ನು ಪ್ರಸರಿಸಿ, ಬಡತನದಲ್ಲಿರುವ ಅಥವಾ ಇಲ್ಲದೆಯೂ ಇರಬಹುದಾದ ಸತ್ಯತೆ ಹಾಗೂ ಪ್ರಾಮಾಣಿಕತೆಯ ಗುಣಗಾನ ಮಾಡುತ್ತ, ಕೆಲಸ ಮಾಡದ ಬಡವನಿಗೂ, ಸೋಮಾರಿಗಳಿಗೂ ಸಮಾಜದ ಸಂಪತ್ತಿನಲ್ಲಿ ಸಮಾನ ಪಾಲಿರುವ ಹಕ್ಕಿನ ದುರಾಸೆ ತೋರಿಸಿ ಇರುವವರದನ್ನು ಕಿತ್ತುಕೊಂಡು ಇರದವರಿಗೆ ಹಂಚುವ ಸಂಚು ನಡಿಸುತ್ತಿರುವುದು ನಮಗೆ ಕಾಣುವುದಿಲ್ಲವೇ? ಹಣ ಸಂಪಾದಿಸಲು ತಪ್ಪು ಹಾದಿ ಹಿಡಿದು ಅನ್ಯಾಯವಾಗಿ ಕಾನೂನು ಬಾಹಿರ ಹಾದಿ ತುಳಿದವರು ಅನೇಕರಿರಬಹುದು. ಆದರೆ ಎಲ್ಲರಿಗೂ ಸಮಾನ ಪಾಲು ಕೊಡಲಾಗಲು ಇನ್ನೂ ಹೆಚ್ಚಿನ ಸಂಪತ್ತು ಸೃಷ್ಟಿ ಮಾಡುವ ಸಕಾರಾತ್ಮಕ ಕೆಲಸ ಮಾಡುವ ಸದುದ್ದೇಶದ ಉದ್ಯಮಿಗಳೆಲ್ಲರನ್ನೂ ಹೀನರೂ, ಖೂಳರೂ, ಸಮಾಜದ ಶತ್ರುಗಳು ಅಂತ ಒಂದೇ ಬಣ್ಣ ಬಳಿಯುವುದು ಯಾವ ನ್ಯಾಯ? ನಾನು ನೀತಿವಂತ, ಪ್ರಾಮಾಣಿಕ ಅನ್ನೋಕ್ಕೆ “ಬಡತನ”ದ ಸರ್ಟಿಫಿಕೇಟ್ ಬೇಕೆ? ಪ್ರಪಂಚದ ಬೇರೆಡೆಯಲ್ಲೆಲ್ಲ ಉತ್ತಮ ಗುಣಮಟ್ಟಕ್ಕಾಗಿ ಶ್ರಮಿಸುತ್ತಿದ್ದಾಗ ನಮ್ಮ ದೇಶದಲ್ಲಿ ಮಾತ್ರ ’ಮೆರಿಟೋಕ್ರೆಸಿ’ಗೆ ಎಳ್ಳು ನೀರು ಬಿಟ್ಟು “ ಮೀಡಿಯೋಕ್ರಿಟಿ” ಗೆ ಆಹ್ವಾನ ಕೊಡುತ್ತಿದ್ದೇವಲ್ಲ? ಒಬ್ಬರ ಯಶಸ್ಸನ್ನು ಕಂಡು ಸಂಭ್ರಮಿಸೋ ಗುಣ ನಮಗೆ ಯಾವಾಗ ಬರುತ್ತೆ? ಐ. ಟಿ. ಕ್ಷೇತ್ರದಲ್ಲಿ ಬೆಳಗಿ ಕಷ್ಟ ಪಟ್ಟು ದುಡಿದು ಭಾರತದಲ್ಲೂ ಹಾಗೂ ವಿದೇಶಗಳಲ್ಲೂ ಐಶ್ವರ್ಯವಂತರಾಗುತ್ತಿರುವ ನಮ್ಮದೇ ಕನ್ನಡದ ಮಕ್ಕಳನ್ನೂ ನಾವು ಹೀಗೆ ಅಸೂಯೆಯಿಂದ ಹೀನಾಯಿಸುತ್ತೀವಾ? ಅಂಬಾನಿ ಅದೆಷ್ಟು ಹಣ ಸಮಾಜಕ್ಕೆ ಗೌಪ್ಯವಾಗಿ ದಾನ ಮಾಡಿದ್ದಾರೋ ಯಾರಿಗೆ ಗೊತ್ತು? ಎಲ್ಲರೂ ಅಮೃತಶಿಲೆಯ ಫಲಕ ಅಪೇಕ್ಷಿಸುವುದಿಲ್ಲ.
(Posted on: Thursday 01st of November 2007 07:34:30 PM)

No comments: